<p><strong>ಬೆಂಗಳೂರು: </strong>ಉತ್ತಮ ಆಟವಾಡಿದ ಕರ್ನಾಟಕದ ಸಮ್ಯಕ್ ಕಶ್ಯಪ್ ಹಾಗೂ ಆಕಾಶ್ ಕೆ.ಜೆ. ಅವರು ರಾಷ್ಟ್ರೀಯ ಜೂನಿಯರ್ ಹಾಗೂ ಯೂತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.</p>.<p>ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಯೂತ್ ಬಾಲಕರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಮ್ಯಕ್ 11–8, 4–11, 9–11, 11–6, 11–5ರಿಂದ ತಮಿಳುನಾಡಿನ ದೀನ್ದಯಾಳ್ ವಿಶ್ವ ಅವರನ್ನು ಮಣಿಸಿದರು. ಜೂನಿಯರ್ ಬಾಲಕರ ವಿಭಾಗದಲ್ಲೂ ಸಮ್ಯಕ್ ಮುಖ್ಯ ಸುತ್ತಿಗೆ ಕಾಲಿಟ್ಟರು. ಈ ವಿಭಾಗದಲ್ಲಿ ಅವರು 11–7, 11–5, 11–5ರಿಂದ ಪಿಎಸ್ಪಿಬಿಎ ತಂಡದ ಲುಬಿತ್ ಮವಾರ್ ಅವರನ್ನು ಸೋಲಿಸಿದರು.</p>.<p>ಜೂನಿಯರ್ ಬಾಲಕರ ವಿಭಾಗದಲ್ಲಿ ಆಕಾಶ್ ಕೆ.ಜೆ 10–12, 13–11, 11–4, 11–9ರಿಂದ ಆಂಧ್ರಪ್ರದೇಶದ ವೆಂಕಟ ಕಾರ್ತಿಕೇಯ ಮನ್ನವ ಎದುರು ಗೆದ್ದರು. ಕರ್ನಾಟಕದ ಶ್ರೀಕಾಂತ್ ಪಿ.ವಿ. ಹಾಗೂ ರೋಹಿತ್ ಶಂಕರ್ ಕೂಡ ಈ ವಿಭಾಗದಲ್ಲಿ ಮುಖ್ಯ ಸುತ್ತಿಗೆ ಲಗ್ಗೆಯಿಟ್ಟರು.</p>.<p>ಶ್ರೀಕಾಂತ್ 11–6, 11–7, 7–11, 11–4ರಿಂದ ಮಿಜೋರಾಂನ ಎಂ.ಆರ್. ಥಾಂಗ್ಸಿಯಾನ್ಸಂಗಾ ಅವರನ್ನು ಪರಾಭವಗೊಳಿಸಿದರೆ, ರೋಹಿತ್ 11-8,8-11,11-3,11-7ರಿಂದ ಉತ್ತರಾಖಂಡದ ಮಿತ್ತಲ್ ಸಕ್ಷಮ್ ಎದುರು ಗೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಉತ್ತಮ ಆಟವಾಡಿದ ಕರ್ನಾಟಕದ ಸಮ್ಯಕ್ ಕಶ್ಯಪ್ ಹಾಗೂ ಆಕಾಶ್ ಕೆ.ಜೆ. ಅವರು ರಾಷ್ಟ್ರೀಯ ಜೂನಿಯರ್ ಹಾಗೂ ಯೂತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.</p>.<p>ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಯೂತ್ ಬಾಲಕರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಮ್ಯಕ್ 11–8, 4–11, 9–11, 11–6, 11–5ರಿಂದ ತಮಿಳುನಾಡಿನ ದೀನ್ದಯಾಳ್ ವಿಶ್ವ ಅವರನ್ನು ಮಣಿಸಿದರು. ಜೂನಿಯರ್ ಬಾಲಕರ ವಿಭಾಗದಲ್ಲೂ ಸಮ್ಯಕ್ ಮುಖ್ಯ ಸುತ್ತಿಗೆ ಕಾಲಿಟ್ಟರು. ಈ ವಿಭಾಗದಲ್ಲಿ ಅವರು 11–7, 11–5, 11–5ರಿಂದ ಪಿಎಸ್ಪಿಬಿಎ ತಂಡದ ಲುಬಿತ್ ಮವಾರ್ ಅವರನ್ನು ಸೋಲಿಸಿದರು.</p>.<p>ಜೂನಿಯರ್ ಬಾಲಕರ ವಿಭಾಗದಲ್ಲಿ ಆಕಾಶ್ ಕೆ.ಜೆ 10–12, 13–11, 11–4, 11–9ರಿಂದ ಆಂಧ್ರಪ್ರದೇಶದ ವೆಂಕಟ ಕಾರ್ತಿಕೇಯ ಮನ್ನವ ಎದುರು ಗೆದ್ದರು. ಕರ್ನಾಟಕದ ಶ್ರೀಕಾಂತ್ ಪಿ.ವಿ. ಹಾಗೂ ರೋಹಿತ್ ಶಂಕರ್ ಕೂಡ ಈ ವಿಭಾಗದಲ್ಲಿ ಮುಖ್ಯ ಸುತ್ತಿಗೆ ಲಗ್ಗೆಯಿಟ್ಟರು.</p>.<p>ಶ್ರೀಕಾಂತ್ 11–6, 11–7, 7–11, 11–4ರಿಂದ ಮಿಜೋರಾಂನ ಎಂ.ಆರ್. ಥಾಂಗ್ಸಿಯಾನ್ಸಂಗಾ ಅವರನ್ನು ಪರಾಭವಗೊಳಿಸಿದರೆ, ರೋಹಿತ್ 11-8,8-11,11-3,11-7ರಿಂದ ಉತ್ತರಾಖಂಡದ ಮಿತ್ತಲ್ ಸಕ್ಷಮ್ ಎದುರು ಗೆದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>