ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸೇಂಟ್ ಆ್ಯಗ್ನೆಸ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಭಾನುವಾರ ಸೇಂಟ್ ಆ್ಯಗ್ನೆಸ್ ಕಾಲೇಜು ಮೈದಾನದಲ್ಲಿ ನಡೆದ ಬಾಲಕರ ವಿಭಾಗದ ಮೊದಲ ಸೆಮಿಫೈನಲ್ ಸ್ಪರ್ಧೆಯಲ್ಲಿ ಬೆಂಗಳೂರು ಉತ್ತರ ತಂಡವು ಮಂಡ್ಯದ ವಿರುದ್ಧ (1–0), ದಕ್ಷಿಣ ಕನ್ನಡ ತಂಡವು ಉಡುಪಿ ವಿರುದ್ಧ (11–1) ಪಾಯಿಂಟ್ ಅಂತರದ ಗೆಲುವು ಸಾಧಿಸಿ ಫೈನಲ್ಗೆ ಅರ್ಹತೆ ಪಡೆದಿದ್ದವು. ಫೈನಲ್ಲ್ಲಿ ಬೆಂಗಳೂರು ಉತ್ತರ ತಂಡವು ದಕ್ಷಿಣ ಕನ್ನಡ ತಂಡದ ವಿರುದ್ಧ (3–1) ಪಾಯಿಂಟ್ ಅಂತರದ ಗೆಲುವು ಸಾಧಿಸಿತು. ದಕ್ಷಿಣ ಕನ್ನಡ ರನ್ನರ್ ಅಪ್ ಸ್ಥಾನಕ್ಕೆ ಖುಷಿ ಪಟ್ಟಿತು.