ಚದುರಂಗದ ತಮ್ಮ ಪಯಣದ ಬಗ್ಗೆ ಮಾತನಾಡಿದ ಆನಂದ್ ‘ನಾನು ದಿಢೀರನೇ ಆಟಗಾರನಾಗಲಿಲ್ಲ. ಅದರ ಹಿಂದೆ ಶ್ರಮವಿತ್ತು. 1980ರ ದಶಕದಲ್ಲಿ ಕಲಿಯುತಿದ್ದ ರೀತಿಯನ್ನು ಈಗ ಯಾರೂ ಅನುಸರಿಸುವುದಿಲ್ಲ. ಕಂಪ್ಯೂಟರ್ಗಳು ಆಟಗಾರರ ಯೋಚನಾ ಲಹರಿಯನ್ನು ಬದಲಾಯಿಸಿವೆ. ಈಗ ಆಟಗಾರರು ಅಧ್ಯಯನ ಮಾಡಿಯೇ ಆಡಲು ಬರುತ್ತಾರೆ’ ಎಂದು ಅವರು ತಿಳಿಸಿದ್ದಾರೆ.