ಇಥ ಅಪಾಯಕಾರಿ ಬಾಕ್ಸರ್ನನ್ನು ಮಣಿಸಲು ಪ್ರಬುದ್ಧ ರಣನೀತಿಯೊಂದಿಗೆ ಕಣಕ್ಕೆ ಇಳಿದಿದ್ದ ಅಮಿತ್ ಆರಂಭದಿಂದಲೇ ನಾಜೂಕಿನ ಹೆಜ್ಜೆ ಇರಿಸಿದರು. ಎದುರಾಳಿ ಆಧಿಪತ್ಯ ಸ್ಥಾಪಿಸದಂತೆ ನೋಡಿಕೊಂಡ ಅವರು ಅವಕಾಶ ಸಿಕ್ಕಿದಾಗಲೆಲ್ಲ ಪಾಯಿಂಟ್ಗಳನ್ನು ಗಳಿಸುತ್ತ ಸಾಗಿದರು. ಆಕ್ರಮಣಕಾರಿ ಪಂಚ್ಗಳ ಜೊತೆಯಲ್ಲಿ ರಕ್ಷಣೆಗೂ ಒತ್ತು ನೀಡಿದ ಅವರಿಗೆ ಎದುರಾಳಿ ಭಾರಿ ಪೈಪೋಟಿ ನೀಡಿದರು. ಆದರೆ ಆ ಸವಾಲನ್ನು ಗೆದ್ದು ಚಿನ್ನ ತಮ್ಮದಾಗಿಸಿಕೊಂಡರು.