ವೆಸ್ಟ್ಬ್ರಿಜ್–ಆನಂದ್ ಚೆಸ್ ಅಕಾಡೆಮಿ (ಡಬ್ಲ್ಯುಎಸಿಎ) ಹೆಸರಿನ ಅಕಾಡೆಮಿಯು ದೇಶದ ಐದು ಮಂದಿ ಉದಯೋನ್ಮುಖ ಪಟುಗಳನ್ನು ಆಯ್ಕೆ ಮಾಡುತ್ತದೆ. ಇವರು ಆನಂದ್ ಅವರಿಂದ ತರಬೇತಿ ಪಡೆಯಲಿದ್ದಾರೆ. ಡಬ್ಲ್ಯುಎಸಿಎಯಿಂದ ತರಬೇತಿ ಹಾಗೂ ಶಿಷ್ಯವೇತನ ಪಡೆಯಲಿರುವ ಮೊದಲ ಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 15 ವರ್ಷದ ಆರ್. ಪ್ರಗ್ನಾನಂದ, ನಿಹಾಲ್ ಸರಿನ್ (16), ರೌನಕ್ ಸಾಧ್ವಾನಿ (15), ಡಿ.ಗುಕೇಶ್ (14) ಹಾಗೂ ಪ್ರಗ್ನಾನಂದ ಅವರ ಸಹೋದರಿ ಆರ್. ವೈಶಾಲಿ (19) ಇದರಲ್ಲಿದ್ದಾರೆ.