<p><strong>ಬೆಂಗಳೂರು:</strong> ‘ಕ್ರೀಡಾಪಟುಗಳಿಗೆ ಶಿಸ್ತು ಮತ್ತು ಸಂಯಮ ಬಹಳ ಅಗತ್ಯ. ಈ ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ಸಾಧನೆಯ ಶಿಖರ ಏರಬಹುದು’ ಎಂದು ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಹೇಳಿದರು.</p>.<p>ಜೈನ್ ಸಮೂಹ ಸಂಸ್ಥೆ (ಜೆಜಿಐ) ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.</p>.<p>‘ನಾನೂ ಜೈನ್ ಕಾಲೇಜಿನ ವಿದ್ಯಾರ್ಥಿ. ಬ್ಯಾಡ್ಮಿಂಟನ್ನಲ್ಲಿ ಎತ್ತರದ ಸಾಧನೆ ಮಾಡಿ ಅರ್ಜುನ ಗೌರವಕ್ಕೆ ಭಾಜನನಾಗುತ್ತೇನೆ ಎಂದು ಖಂಡಿತಾ ಊಹಿಸಿರಲಿಲ್ಲ. ಶ್ರದ್ಧೆ ಮತ್ತು ಕಠಿಣ ಪರಿಶ್ರಮ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನೀವೆಲ್ಲರೂ ಪ್ರತಿಭಾವಂತರೆ. ಯಾರೂ ಕೈಕಟ್ಟಿ ಕೂರಬೇಡಿ. ಜೀವನ ಪ್ರೀತಿ ಬೆಳೆಸಿಕೊಳ್ಳಿ. ಸಾಧನೆಯ ಛಲದೊಂದಿಗೆ ಮುಂದಡಿ ಇಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.</p>.<p>ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕದ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.</p>.<p>ಅಂತರರಾಷ್ಟ್ರೀಯ ಈಜುಪಟು ಶ್ರೀಹರಿ ನಟರಾಜ್ಗೆ ₹1.50 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಈಜುಪಟು ವಿ.ಕೆ.ಆರ್. ಮೀನಾಕ್ಷಿ (₹ 50 ಸಾವಿರ), ಶ್ರುತಿ ಮಹಾಲಿಂಗಂ (₹ 25 ಸಾವಿರ), ದೀಕ್ಷಾ ರಮೇಶ್ (₹ 15 ಸಾವಿರ), ರಕ್ಷಿತ್ ಶೆಟ್ಟಿ (₹ 26 ಸಾವಿರ), ಎಸ್.ಪಿ.ಲಿಖಿತ್ (₹34 ಸಾವಿರ) ಅವರೂ ಬಹುಮಾನ ಪಡೆದರು.</p>.<p>ಜೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಚೆನ್ರಾಜ್ ರಾಯಚಂದ್, ಕ್ರೀಡಾ ಶಿಕ್ಷಣ ನಿರ್ದೇಶಕ ಯು.ವಿ.ಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕ್ರೀಡಾಪಟುಗಳಿಗೆ ಶಿಸ್ತು ಮತ್ತು ಸಂಯಮ ಬಹಳ ಅಗತ್ಯ. ಈ ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ಸಾಧನೆಯ ಶಿಖರ ಏರಬಹುದು’ ಎಂದು ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಹೇಳಿದರು.</p>.<p>ಜೈನ್ ಸಮೂಹ ಸಂಸ್ಥೆ (ಜೆಜಿಐ) ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.</p>.<p>‘ನಾನೂ ಜೈನ್ ಕಾಲೇಜಿನ ವಿದ್ಯಾರ್ಥಿ. ಬ್ಯಾಡ್ಮಿಂಟನ್ನಲ್ಲಿ ಎತ್ತರದ ಸಾಧನೆ ಮಾಡಿ ಅರ್ಜುನ ಗೌರವಕ್ಕೆ ಭಾಜನನಾಗುತ್ತೇನೆ ಎಂದು ಖಂಡಿತಾ ಊಹಿಸಿರಲಿಲ್ಲ. ಶ್ರದ್ಧೆ ಮತ್ತು ಕಠಿಣ ಪರಿಶ್ರಮ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನೀವೆಲ್ಲರೂ ಪ್ರತಿಭಾವಂತರೆ. ಯಾರೂ ಕೈಕಟ್ಟಿ ಕೂರಬೇಡಿ. ಜೀವನ ಪ್ರೀತಿ ಬೆಳೆಸಿಕೊಳ್ಳಿ. ಸಾಧನೆಯ ಛಲದೊಂದಿಗೆ ಮುಂದಡಿ ಇಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.</p>.<p>ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕದ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.</p>.<p>ಅಂತರರಾಷ್ಟ್ರೀಯ ಈಜುಪಟು ಶ್ರೀಹರಿ ನಟರಾಜ್ಗೆ ₹1.50 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಈಜುಪಟು ವಿ.ಕೆ.ಆರ್. ಮೀನಾಕ್ಷಿ (₹ 50 ಸಾವಿರ), ಶ್ರುತಿ ಮಹಾಲಿಂಗಂ (₹ 25 ಸಾವಿರ), ದೀಕ್ಷಾ ರಮೇಶ್ (₹ 15 ಸಾವಿರ), ರಕ್ಷಿತ್ ಶೆಟ್ಟಿ (₹ 26 ಸಾವಿರ), ಎಸ್.ಪಿ.ಲಿಖಿತ್ (₹34 ಸಾವಿರ) ಅವರೂ ಬಹುಮಾನ ಪಡೆದರು.</p>.<p>ಜೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಚೆನ್ರಾಜ್ ರಾಯಚಂದ್, ಕ್ರೀಡಾ ಶಿಕ್ಷಣ ನಿರ್ದೇಶಕ ಯು.ವಿ.ಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>