ಫಲಿತಾಂಶದ ನಂತರ ಇಲ್ಲಿನ ಕುಮಾರೇಶ್ವರ ವಿರಕ್ತಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ, ಹೊರಭಾಗದ ಪಿಳ್ಳನಕಟ್ಟಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಬಳಿಕ ಮಾತನಾಡಿದರು. ‘1972 ರಿಂದಲೂ ಹೊರಗಿನ ಅಭ್ಯರ್ಥಿಗೆ ಕ್ಷೇತ್ರದ ಮತದಾರರು ಮಣೆ ಹಾಕಿಲ್ಲ. ಈ ಸಂಪ್ರದಾಯ ಈ ಚುನಾವಣೆಯಲ್ಲೂ ಮುಂದುವರೆದಿದೆ. ಕ್ಷೇತ್ರದವರಲ್ಲದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಮತದಾರರು ತಿರಸ್ಕರಿಸಿದ್ದಾರೆ’ ಎಂದರು.
‘ಈ ಚುನಾವಣೆ ಒಂದು ಅರ್ಥದಲ್ಲಿ ಸಂಪತ್ತಿಗೆ ಸವಾಲ್ ಎನ್ನುವಂತಿತ್ತು, ಕಾಂಗ್ರೆಸ್ ವಿರೋಧಿ ಅಲೆ ಗಮನದಲ್ಲಿಟ್ಟುಕೊಂಡು ಹಣ, ಹೆಂಡದ ಮೂಲಕ ಆಮಿಷ ತೋರಿಸಿದ್ದ ಕಾಂಗ್ರೆಸ್ಸಿಗರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದರು.