ಮಗನ ಬಗ್ಗೆ ಹಮ್ಮೆಯಿದೆ:
‘ನನ್ನ ಮಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದು, ನಮ್ಮ ದೇಶಕ್ಕೆ ಕಂಚಿನ ಪದಕ ತಂದಿರುವುದು ಅತ್ಯಂತ ಖುಷಿ ನೀಡಿದೆ. ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿದ್ದ. ಕಾಮನ್ವೇಲ್ತ್ ಗೆ ತೆರಳುವಾಗಲೇ ಕೈ ನೋವು ಮಾಡಿಕೊಂಡಿದ್ದ ಗುರು, ಏನು ಮಾಡುತ್ತಾನೋ ಎನ್ನುವ ಆತಂಕ ಇತ್ತು. ಪದಕ ಪಡೆದಿರುವ ಮಗನ ಬಗ್ಗೆ ಹೆಮ್ಮೆ ಇದೆ’ ಎಂದು ಗುರುರಾಜ್ ಅವರ ತಂದೆ ಮಹಾಬಲ ಪೂಜಾರಿ ಸಂತಸ ವ್ಯಕ್ತಪಡಿಸಿದರು.