ಕೋಲ್ಕತ್ತ: ಸತತ ಪಂದ್ಯಗಳನ್ನು ಆಡಿದ್ದೇ ಪಿ.ವಿ.ಸಿಂಧು ಅವರ ಸಾಮರ್ಥ್ಯ ಕುಗ್ಗಲು ಕಾರಣ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ.
‘ವಿಶ್ವ ಚಾಂಪಿಯನ್ಷಿಪ್ ನಂತರದ ಕೆಲವು ಪಂದ್ಯಗಳಲ್ಲಿ ಸಿಂಧುಗೆ ನೈಜ ಸಾಮರ್ಥ್ಯ ತೋರಲು ಆಗಲಿಲ್ಲ ನಿಜ. ಆದರೆ ಮುಂದಿನ ದಿನಗಳಲ್ಲಿ ಅವರು ಪುಟಿದೇಳುವ ವಿಶ್ವಾಸವಿದೆ’ ಎಂದು ಗೋಪಿಚಂದ್ ಸುದ್ದಿಸಂಸ್ಥೆ ಜೊತೆ ಮಾತನಾಡಿ ಹೇಳಿದರು.
‘ಅಂತರರಾಷ್ಟ್ರೀಯ ವೇಳಾಪಟ್ಟಿಯು ವಿಶ್ವದ ಅನೇಕ ಆಟಗಾರರ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಸಿಂಧುಗೆ ಕೂಡ ಇದೇ ಸಮಸ್ಯೆ ಆಗಿದೆ’ ಎಂದು ಅವರು ಹೇಳಿದರು.
ವಿಶ್ವ ಚಾಂಪಿಯನ್ ಆದ ನಂತರ ಫ್ರೆಂಚ್ ಓಪನ್ ಹೊರತುಪಡಿಸಿದರೆ ಉಳಿದ ಎಲ್ಲ ಟೂರ್ನಿಗಳಲ್ಲೂ ಸಿಂಧು ಆರಂಭಿಕ ಹಂತದಲ್ಲೇ ಹೊರಬಿದ್ದಿದ್ದಾರೆ.