ಶ್ರೀನಗರ: ಉಗ್ರಗಾಮಿಗಳ ಸಂಘಟನೆ ಸೇರಿದ ಕಾಶ್ಮೀರಿ ಯುವಕನೊಬ್ಬ ತಾಯಿಯ ಕರೆಗೆ ಓಗೊಟ್ಟು ಮನೆಗೆ ಹಿಂದಿರುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಮೂನಾ ಮುಸ್ತಾಕ್ ಎಂಬುವವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮನೆಗೆ ಹಿಂದಿರುಗಲು ಮಗನಿಗೆ ಮನವಿ ಮಾಡಿಕೊಂಡಿದ್ದರು. ‘ಅದಕ್ಕೆ ಆತ ಸ್ಪಂದಿಸಿ ಮನೆಗೆ ಮರಳಿದ್ದಾನೆ’ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ್ ‘ಟ್ವೀಟ್’ ಮಾಡಿದ್ದಾರೆ. ಆದರೆ, ಅವರು ವಿವರಗಳನ್ನು ನೀಡಿಲ್ಲ.