ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್ಎಐ) ರಾಣಾ ಅವರನ್ನು ಹೋದ ವರ್ಷ ಕೂಡ ಈ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಆದರೆ ಅವರಿಗೆ ಪುರಸ್ಕಾರ ಲಭಿಸಿರಲಿಲ್ಲ. ಅನುಭವಿ ಕೋಚ್ ರಾಣಾ ಅವರನ್ನು ಆಯ್ಕೆ ಮಾಡದ ಸಮಿತಿಯ ಕ್ರಮವನ್ನುಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರು ಟೀಕಿಸಿದ್ದರು. ಇದರಿಂದ ಭಾರಿ ವಿವಾದವೇ ಸೃಷ್ಟಿಯಾಗಿತ್ತು.