<p><strong>ಬೆಂಗಳೂರು:</strong> ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಮತ್ತು ಯೂತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಆಟಗಾರರು ಬುಧವಾರ ನಿರಾಸೆ ಅನುಭವಿಸಿದರು.</p>.<p>ಜೂನಿಯರ್ ಬಾಲಕರ ವಿಭಾಗದಲ್ಲಿ ಸಮ್ಯಕ್ ಕಶ್ಯಪ್ ಪ್ರೀಕ್ವಾರ್ಟರ್ಫೈನಲ್ವರೆಗೆ ತಲುಪಿದ್ದರು. ಆದರೆ ಬಂಗಾಳದ ಸೌಮ್ಯದೀಪ್ ಸರ್ಕಾರ್ ವಿರುದ್ಧ 8-11,9-11,10-12ರಿಂದ ವೀರೋಚಿತ ಸೋಲು ಅನುಭವಿಸಿದರು. ಆದರೆ ಯೂತ್ ವಿಭಾಗದಲ್ಲಿ ಸಮ್ಯಕ್ ಮೊದಲ ಸುತ್ತಿನ ಪಂದ್ಯದಲ್ಲೇ 7-11,12-10,11-8,6-11,10-12ರಿಂದ ಯೆಂಗ್ಕೋಮ್ ಕೆ. ಎದುರು ಮಣಿದರು.</p>.<p>ಜೂನಿಯರ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಆಕಾಶ್ ಕೆ.ಜೆ 11-6,6-11,4-11,3-11ರಿಂದ ಉತ್ತರ ಪ್ರದೇಶದ ದಿವ್ಯಾಂಶ್ ಶ್ರೀವಾತ್ಸವ್ ಎದುರು ಸೋತರು.</p>.<p>ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀಕಾಂತ್ ಕಶ್ಯಪ್ ಹಾಗೂ ರೋಹಿತ್ ಶಂಕರ್ ಅವರಿಗೂ ಮೊದಲ ಸುತ್ತಿನ ತಡೆ ದಾಟಲಾಗಲಿಲ್ಲ. ಶ್ರೀಕಾಂತ್ 6-11,6-11,9-11ರಿಂದ ಸಂತೋಚ್ ಎ.ಪಿ. ಎದುರು, ರೋಹಿತ್ 6-11,5-11,3-11ರಿಂದ ಅಭಿಲಾಷ್ ರಾವಲ್ ವಿರುದ್ಧ ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಮತ್ತು ಯೂತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಆಟಗಾರರು ಬುಧವಾರ ನಿರಾಸೆ ಅನುಭವಿಸಿದರು.</p>.<p>ಜೂನಿಯರ್ ಬಾಲಕರ ವಿಭಾಗದಲ್ಲಿ ಸಮ್ಯಕ್ ಕಶ್ಯಪ್ ಪ್ರೀಕ್ವಾರ್ಟರ್ಫೈನಲ್ವರೆಗೆ ತಲುಪಿದ್ದರು. ಆದರೆ ಬಂಗಾಳದ ಸೌಮ್ಯದೀಪ್ ಸರ್ಕಾರ್ ವಿರುದ್ಧ 8-11,9-11,10-12ರಿಂದ ವೀರೋಚಿತ ಸೋಲು ಅನುಭವಿಸಿದರು. ಆದರೆ ಯೂತ್ ವಿಭಾಗದಲ್ಲಿ ಸಮ್ಯಕ್ ಮೊದಲ ಸುತ್ತಿನ ಪಂದ್ಯದಲ್ಲೇ 7-11,12-10,11-8,6-11,10-12ರಿಂದ ಯೆಂಗ್ಕೋಮ್ ಕೆ. ಎದುರು ಮಣಿದರು.</p>.<p>ಜೂನಿಯರ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಆಕಾಶ್ ಕೆ.ಜೆ 11-6,6-11,4-11,3-11ರಿಂದ ಉತ್ತರ ಪ್ರದೇಶದ ದಿವ್ಯಾಂಶ್ ಶ್ರೀವಾತ್ಸವ್ ಎದುರು ಸೋತರು.</p>.<p>ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀಕಾಂತ್ ಕಶ್ಯಪ್ ಹಾಗೂ ರೋಹಿತ್ ಶಂಕರ್ ಅವರಿಗೂ ಮೊದಲ ಸುತ್ತಿನ ತಡೆ ದಾಟಲಾಗಲಿಲ್ಲ. ಶ್ರೀಕಾಂತ್ 6-11,6-11,9-11ರಿಂದ ಸಂತೋಚ್ ಎ.ಪಿ. ಎದುರು, ರೋಹಿತ್ 6-11,5-11,3-11ರಿಂದ ಅಭಿಲಾಷ್ ರಾವಲ್ ವಿರುದ್ಧ ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>