‘2012ರ ಲಂಡನ್ ಒಲಿಂಪಿಕ್ ಕೂಟದ ನಿರಾಶೆಯೊಂದಿಗೆ ವೃತ್ತಿಜೀವನ ಆರಂಭವಾಗಿತ್ತು. ಟೋಕಿಯೊದಲ್ಲಿ ಕಂಚಿನ ಪದಕ ಜಯಿಸಿದ ಸಿಹಿಕ್ಷಣವೂ ನನ್ನ ಪಾಲಿನದ್ದಾಯಿತು. ಈ ನಡುವೆ ಭಾರತ ತಂಡದ ನಾಯಕತ್ವ ವಹಿಸಿದ್ದೆ. ಆದರೆ, ಲೆಗ್ಮೆಂಟ್ ಗಾಯದಿಂದಾಗಿಯೇ ನನ್ನ ಬಹುತೇಕ ಸಮಯವು ಕಳೆದುಹೋಯಿತು. ಕೇರಳದಲ್ಲಿ ಅವಿಯಾಲ ಎಂಬ ಜನಪ್ರಿಯ ಖಾದ್ಯವಿದೆ. ಅದರಲ್ಲಿ 13 ತರಕಾರಿಗಳನ್ನು ಬಳಸಿ ಸಾರು ಮಾಡಲಾಗುತ್ತದೆ. ಅದೇ ತರಹ ನನ್ನ ವೃತ್ತಿಜೀವನ ಕೂಡ. ತರಹೇವಾರಿ ಅನುಭವಗಳು ಮಿಶ್ರಣಗೊಂಡಿವೆ’ಎಂದು ಮಾರ್ಮಿಕವಾಗಿ ಹೇಳಿದರು.