<p><strong>ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ):</strong> ಪಟ್ಟಣದ ಕೆಎಲ್ಇ ಸಂಸ್ಥೆಯ ಮೈದಾನದಲ್ಲಿ ಸಿದ್ದು ಕೊಣ್ಣೂರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸೋಮವಾರ ರಾತ್ರಿ ನಡೆದ ಅಖಿಲ ಭಾರತ ‘ಎ’ ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೇರಳ ತಂಡ ಶುಭಾರಂಭ ಮಾಡಿತು.</p>.<p>ಹುಬ್ಬಳ್ಳಿಯ ಬಿ.ಸಿ.ರಮೇಶ ಅಕಾಡೆಮಿ ತಂಡದ ವಿರುದ್ಧ 25-31 ರಿಂದ ಕೇರಳ ತಂಡ ಜಯಿಸಿತು. ಪ್ರಥಮಾರ್ಧದಲ್ಲಿ 11–11 ಸಮಬಲ ಸಾಧಿಸಿದ ಎರಡೂ ತಂಡಗಳ ಮಧ್ಯೆ ತೀವ್ರ ಸೆಣಸಾಟ ನಡೆಯಿತು. ಹುಬ್ಬಳ್ಳಿ ಬಿ.ಸಿ.ರಮೇಶ ಅಕಾಡೆಮಿ ತಂಡದ ರಕ್ಷಣಾ ತಂತ್ರಗಳು ಫಲ ನೀಡಲಿಲ್ಲ. ಎದುರಾಳಿ ಕೇರಳ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲಗೊಂಡು ಸೋಲು ಅನುಭವಿಸಿತು.</p>.<p>ಇನ್ನೊಂದು ಪಂದ್ಯದಲ್ಲಿ ಮುಂಬೈ ತಂಡವು ಹಾವೇರಿ ತಂಡದ ವಿರುದ್ಧ 30–10 ರಿಂದ ಭರ್ಜರಿ ಗೆದ್ದಿತು. ಹಾವೇರಿ ತಂಡಕ್ಕೆ ಯಾವುದೇ ಹಂತದಲ್ಲಿಯೂ ಮೇಲುಗೈ ಸಾಧಿಸಲು ಅವಕಾಶ ನೀಡದ ಮುಂಬೈ ತಂಡ ಪ್ರಥಮಾರ್ಧದಲ್ಲಿ 17 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಕೊನೆಯವರೆಗೂ ಬಿಗಿಹಿಡಿತ ಸಾಧಿಸಿದ ಮುಂಬೈ ತಂಡ ನಿರಾಯಾಸವಾಗಿ ಗೆಲುವನ್ನು ಒಲಿಸಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ):</strong> ಪಟ್ಟಣದ ಕೆಎಲ್ಇ ಸಂಸ್ಥೆಯ ಮೈದಾನದಲ್ಲಿ ಸಿದ್ದು ಕೊಣ್ಣೂರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸೋಮವಾರ ರಾತ್ರಿ ನಡೆದ ಅಖಿಲ ಭಾರತ ‘ಎ’ ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೇರಳ ತಂಡ ಶುಭಾರಂಭ ಮಾಡಿತು.</p>.<p>ಹುಬ್ಬಳ್ಳಿಯ ಬಿ.ಸಿ.ರಮೇಶ ಅಕಾಡೆಮಿ ತಂಡದ ವಿರುದ್ಧ 25-31 ರಿಂದ ಕೇರಳ ತಂಡ ಜಯಿಸಿತು. ಪ್ರಥಮಾರ್ಧದಲ್ಲಿ 11–11 ಸಮಬಲ ಸಾಧಿಸಿದ ಎರಡೂ ತಂಡಗಳ ಮಧ್ಯೆ ತೀವ್ರ ಸೆಣಸಾಟ ನಡೆಯಿತು. ಹುಬ್ಬಳ್ಳಿ ಬಿ.ಸಿ.ರಮೇಶ ಅಕಾಡೆಮಿ ತಂಡದ ರಕ್ಷಣಾ ತಂತ್ರಗಳು ಫಲ ನೀಡಲಿಲ್ಲ. ಎದುರಾಳಿ ಕೇರಳ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲಗೊಂಡು ಸೋಲು ಅನುಭವಿಸಿತು.</p>.<p>ಇನ್ನೊಂದು ಪಂದ್ಯದಲ್ಲಿ ಮುಂಬೈ ತಂಡವು ಹಾವೇರಿ ತಂಡದ ವಿರುದ್ಧ 30–10 ರಿಂದ ಭರ್ಜರಿ ಗೆದ್ದಿತು. ಹಾವೇರಿ ತಂಡಕ್ಕೆ ಯಾವುದೇ ಹಂತದಲ್ಲಿಯೂ ಮೇಲುಗೈ ಸಾಧಿಸಲು ಅವಕಾಶ ನೀಡದ ಮುಂಬೈ ತಂಡ ಪ್ರಥಮಾರ್ಧದಲ್ಲಿ 17 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಕೊನೆಯವರೆಗೂ ಬಿಗಿಹಿಡಿತ ಸಾಧಿಸಿದ ಮುಂಬೈ ತಂಡ ನಿರಾಯಾಸವಾಗಿ ಗೆಲುವನ್ನು ಒಲಿಸಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>