ಬೆಂಗಳೂರು: ನಿಖಿತಾ ರಾಮಕೃಷ್ಣ– ಕುಮಾರಿ ಜಾಗೃತಿ ಜೋಡಿಯು ರೆಡ್ ಬುಲ್ ಶಟಲ್ಸ್ ಅಪ್ ಬ್ಯಾಡ್ಮಿಂಟನ್ ಟೂರ್ನಿಯ ಬೆಂಗಳೂರು ಕ್ವಾಲಿ ಫೈಯರ್ಸ್ ಜಯಿಸಿದರು. ಇದರೊಂದಿಗೆ ರಾಷ್ಟ್ರೀಯ ಫೈನಲ್ಸ್ಗೆ ಅರ್ಹತೆ ಗಳಿಸಿದರು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಪೂಜಿತಾ ಹಾಗೂ ನಿಹಾರಿಕಾ ಶ್ರೀಧರ್ ಜೋಡಿಯನ್ನು 11–8, 11–4ರಿಂದ ಸೋಲಿಸಿದರು.
ರಾಷ್ಟ್ರೀಯ ಫೈನಲ್ಸ್ ಟೂರ್ನಿಯು ಡಿಸೆಂಬರ್ 8ರಂದು ಹೈದರಾಬಾದ್ನಲ್ಲಿ ನಡೆಯಲಿದೆ.