‘ಸರ್ಕಾರವು ಸಂಪೂರ್ಣ ವೆಚ್ಚ ಭರಿಸುತ್ತಿದ್ದರೂ, ಪೂರ್ಣ ಪ್ರಮಾಣದ ತಂಡ ಕರೆದೊಯ್ಯುತ್ತಿಲ್ಲ. ಇದೇ ತಿಂಗಳು ನೋಯ್ಡಾದಲ್ಲಿ ನಡೆದ ಹಿರಿಯರ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ತೆರಳಿದ್ದ ತಂಡದೊಂದಿಗೆ ತರಬೇತುದಾರರು ಮತ್ತು ವ್ಯವಸ್ಥಾಪಕರು ಇರಲಿಲ್ಲ. ಪಟುಗಳು ಮರಳುವಾಗ ರೈಲಿನಲ್ಲಿ ಸೀಟಿನ ವ್ಯವಸ್ಥೆ ಮಾಡಿರಲಿಲ್ಲ. ಹೆಸರಾಂತ ಹಾಗೂ ಅಂತರರಾಷ್ಟ್ರೀಯ ಕುಸ್ತಿಪಟುಗಳು ರೈಲು ನಿಲ್ದಾಣದಲ್ಲೇ ಊಟ, ಉಪಾಹಾರಕ್ಕಾಗಿ ಪರದಾಡಿ ಕಷ್ಟಪಟ್ಟು ಬಂದು ಸೇರಿದ್ದಾರೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.