ಕೋವಿಡ್–19 ಏರುಗತಿಯಲ್ಲಿ ಸಾಗುತ್ತಿರುವುದರಿಂದ ಭಾರತ, ಮಲೇಷ್ಯಾ ಮತ್ತು ಸಿಂಗಪುರದಲ್ಲಿ ಓಪನ್ ಟೂರ್ನಿಗಳನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ರದ್ದುಗೊಳಿಸಿತ್ತು. ಒಲಿಂಪಿಕ್ಸ್ಗೂ ಮುನ್ನ ನಡೆಯಬೇಕಾಗಿದ್ದ ಪ್ರಮುಖ ಟೂರ್ನಿಗಳು ಆಗಿದ್ದವು ಇವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಸಿಂಧು ‘ಸಿಂಗಪುರ ಓಪನ್ ಟೂರ್ನಿಯೂ ರದ್ದಾದ ಕಾರಣ ಒಲಿಂಪಿಕ್ಸ್ಗೆ ಮುನ್ನ ಟೂರ್ನಿಗಳೇ ಇಲ್ಲ ಎಂದಾಗಿದೆ. ಅದರ ಬಗ್ಗೆ ಹೆಚ್ಚು ಯೋಚಿಸದೆ ಬೇರೆ ಬೇರೆ ಆಟಗಾರ್ತಿಯರ ಜೊತೆ ಪಂದ್ಯ ಆಡುತ್ತಿದ್ದೇನೆ. ಕೋಚ್ ನನ್ನ ಬೆನ್ನಿಗಿದ್ದಾರೆ’ ಎಂದರು.