ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾ ದೂರು: ತನಿಖೆಗೆ ಸಮಿತಿ ರಚನೆ

Last Updated 27 ಮೇ 2022, 16:00 IST
ಅಕ್ಷರ ಗಾತ್ರ

ನವದೆಹಲಿ: ಫಿಟ್ನೆಸ್ ಪರೀಕ್ಷೆಯ ಸಂದರ್ಭದಲ್ಲಿ ಅನುಮತಿ ಪಡೆಯದೆಯೇ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಜಿಮ್ನಾಸ್ಟ್‌ ಅರುಣಾ ಬುದ್ಧ ರೆಡ್ಡಿ ದೂರಿರುವ ಹಿನ್ನೆಲೆಯಲ್ಲಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತನಿಖೆಗೆ ಮೂವರ ಸಮಿತಿ ರಚಿಸಿದೆ.

ಸಾಯ್‌ ಕಾರ್ಯನಿರ್ವಾಹಕ ನಿರ್ದೇಶಕಿ ರಾಧಿಕಾ ಶ್ರಿರಾಮ್ ಅವರಿಗೆ ತಂಡದ ನೇತೃತ್ವ ವಹಿಸಲಾಗಿದ್ದು ಕೋಚ್ ಕಮಲೇಶ್ ತಿವಾನ ಮತ್ತು ಉಪನಿರ್ದೇಶಕ ಕೈಲಾಶ್‌ ಮೀನಾ ಇದ್ದಾರೆ. ಕೋಚ್‌ ರೋಹಿತ್ ಜೈಸ್ವಾಲ್ ವಿರುದ್ಧ ಅರುಣಾ ರೆಡ್ಡಿ ದೂರು ದಾಖಲಿಸಿದ್ದರು. ಆದರೆ ಭಾರತ ಜಿಮ್ನಾಸ್ಟಿಕ್ಸ್ ಫೆಡರೇಷನ್ ರೋಹಿತ್ ಅವರನ್ನು ಆರೋಪಮುಕ್ತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT