<p><strong>ನವದೆಹಲಿ:</strong> ಭಾರತದ ಪ್ರಮುಖ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಅವರು ಕೋವಿಡ್ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ.10 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ ಟೇಬಲ್ ಟೆನಿಸ್ ಕ್ರೀಡಾ ಪರಿಧಿಯೊಳಗೆ ಕಾರ್ಯನಿರ್ವಹಿಸುವ 100 ಮಂದಿಗೆ ನೀಡಲು ಅವರು ನಿರ್ಧರಿಸಿದ್ದಾರೆ.</p>.<p>ಶರತ್ ಮತ್ತು ಸತ್ಯನ್ ಅವರ ಪ್ರಯತ್ನಕ್ಕೆ ಹಿರಿಯ ಆಟಗಾರ್ತಿ ನೇಹಾ ಅಗರವಾಲ್ ಕೂಡ ಜೋಡಿಸಿದ್ದಾರೆ. ಈ ಮೂವರು ಸೇರಿ ಈಗಾಗಲೇ ನಾಲ್ಕು ದಿನಗಳಲ್ಲಿ ₹7 ಲಕ್ಷ ಸಂಗ್ರಹಿಸಿದ್ದಾರೆ. ಈ ನಿಧಿಯನ್ನು ಆಟಗಾರರು, ತರಬೇತುದಾರರು ಹಾಗೂ ಅಂಪೈರ್ಗಳಿಗೆ ಹಂಚಲಿದ್ದಾರೆ.</p>.<p>‘ತಮ್ಮ ಸಹ ಆಟಗಾರರಾಗಿದ್ದ, ಸದ್ಯ ತರಬೇತುದಾರರಾಗಿ ಕೆಲಸ ಮಾಡುತ್ತಿರುವವರು ಎದುರಿಸುತ್ತಿರುವ ದುಸ್ಥಿತಿಯ ಬಗ್ಗೆ ಸತ್ಯನ್ ನನಗೆ ತಿಳಿಸಿದರು. ಸದ್ಯದ ಬಿಕ್ಕಟ್ಟಿನಲ್ಲಿ ಅವರಿಗೆ ಯಾವುದೇ ಉದ್ಯೋಗವಿಲ್ಲ. ಹಾಗಾಗಿ ನಾವು ಕನಿಷ್ಠ ಇಷ್ಟಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದೆವು’ ಎಂದು ಶರತ್ ಹೇಳಿದ್ದಾರೆ.</p>.<p>‘ನಮ್ಮ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಧಿ ಸಂಗ್ರಹ ಹೆಚ್ಚಿಸಿ 100ಕ್ಕಿಂತ ಹೆಚ್ಚು ಮಂದಿಗೆ ನೆರವಾಗುತ್ತೇವೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ತಿಳಿಸುತ್ತೇವೆ’ ಎಂದು ಶರತ್ ನುಡಿದರು.</p>.<p>ಹಣದ ಅಗತ್ಯವಿರುವವರ ಪಟ್ಟಿ ತಯಾರಿಸಲು ಶರತ್ ಹಾಗೂ ಸತ್ಯನ್ ಅವರಿಗೆ ಸೌಮ್ಯದೀಪ್ ರಾಯ್, ಕಮಲೇಶ್ ಮೆಹ್ತಾ ಸೇರಿದಂತೆ ಹಲವರು ನೆರವಾಗುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದ ಪ್ರಮುಖ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಅವರು ಕೋವಿಡ್ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ.10 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ ಟೇಬಲ್ ಟೆನಿಸ್ ಕ್ರೀಡಾ ಪರಿಧಿಯೊಳಗೆ ಕಾರ್ಯನಿರ್ವಹಿಸುವ 100 ಮಂದಿಗೆ ನೀಡಲು ಅವರು ನಿರ್ಧರಿಸಿದ್ದಾರೆ.</p>.<p>ಶರತ್ ಮತ್ತು ಸತ್ಯನ್ ಅವರ ಪ್ರಯತ್ನಕ್ಕೆ ಹಿರಿಯ ಆಟಗಾರ್ತಿ ನೇಹಾ ಅಗರವಾಲ್ ಕೂಡ ಜೋಡಿಸಿದ್ದಾರೆ. ಈ ಮೂವರು ಸೇರಿ ಈಗಾಗಲೇ ನಾಲ್ಕು ದಿನಗಳಲ್ಲಿ ₹7 ಲಕ್ಷ ಸಂಗ್ರಹಿಸಿದ್ದಾರೆ. ಈ ನಿಧಿಯನ್ನು ಆಟಗಾರರು, ತರಬೇತುದಾರರು ಹಾಗೂ ಅಂಪೈರ್ಗಳಿಗೆ ಹಂಚಲಿದ್ದಾರೆ.</p>.<p>‘ತಮ್ಮ ಸಹ ಆಟಗಾರರಾಗಿದ್ದ, ಸದ್ಯ ತರಬೇತುದಾರರಾಗಿ ಕೆಲಸ ಮಾಡುತ್ತಿರುವವರು ಎದುರಿಸುತ್ತಿರುವ ದುಸ್ಥಿತಿಯ ಬಗ್ಗೆ ಸತ್ಯನ್ ನನಗೆ ತಿಳಿಸಿದರು. ಸದ್ಯದ ಬಿಕ್ಕಟ್ಟಿನಲ್ಲಿ ಅವರಿಗೆ ಯಾವುದೇ ಉದ್ಯೋಗವಿಲ್ಲ. ಹಾಗಾಗಿ ನಾವು ಕನಿಷ್ಠ ಇಷ್ಟಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದೆವು’ ಎಂದು ಶರತ್ ಹೇಳಿದ್ದಾರೆ.</p>.<p>‘ನಮ್ಮ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಧಿ ಸಂಗ್ರಹ ಹೆಚ್ಚಿಸಿ 100ಕ್ಕಿಂತ ಹೆಚ್ಚು ಮಂದಿಗೆ ನೆರವಾಗುತ್ತೇವೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ತಿಳಿಸುತ್ತೇವೆ’ ಎಂದು ಶರತ್ ನುಡಿದರು.</p>.<p>ಹಣದ ಅಗತ್ಯವಿರುವವರ ಪಟ್ಟಿ ತಯಾರಿಸಲು ಶರತ್ ಹಾಗೂ ಸತ್ಯನ್ ಅವರಿಗೆ ಸೌಮ್ಯದೀಪ್ ರಾಯ್, ಕಮಲೇಶ್ ಮೆಹ್ತಾ ಸೇರಿದಂತೆ ಹಲವರು ನೆರವಾಗುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>