ನವದೆಹಲಿ: ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು ಅವರು ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.
ಒಟ್ಟು 20 ಆಟಗಾರರಿರುವ ತಂಡವನ್ನು ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಬಿಎಐ) ಗುರುವಾರ ಪ್ರಕಟಿಸಿದೆ. ಥಾಮಸ್ ಕಪ್ ಟೂರ್ನಿಯಲ್ಲಿ ಭಾರತವು ಸಿ ಗುಂಪಿನಲ್ಲಿ ಮತ್ತು ಊಬರ್ ಕಪ್ ಟೂರ್ನಿಯಲ್ಲಿ ತಂಡವು ಡಿ ಗುಂಪಿನಲ್ಲಿ ಆಡಲಿದೆ. ಅಕ್ಟೋಬರ್ 3ರಿಂದ 11ರವರೆಗೆ ಟೂರ್ನಿ ನಡೆಯಲಿದೆ.
ಡೆನ್ಮಾರ್ಕ್ ಓಪನ್ ಮತ್ತು ಮಾಸ್ಟರ್ಸ್ ಟೂರ್ನಿಗಳಲ್ಲಿ ಆಡುವ ಭಾರತ ತಂಡಗಳನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.
ತಂಡಗಳು ಥಾಮಸ್ ಕಪ್: ಕಿದಂಬಿ ಶ್ರೀಕಾಂತ್, ಪಿ. ಕಶ್ಯಪ್, ಲಕ್ಷ್ಯ ಸೇನ್, ಶುಭಂಕರ್ ಡೇ, ಸಿರಿಲ್ ವರ್ಮಾ, ಮನು ಅತ್ರಿ, ಬಿ. ಸುಮೀತ್ ರೆಡ್ಡಿ, ಎಂ.ಆರ್. ಅರ್ಜುನ್, ಧ್ರುವ ಕಪಿಲಾ, ಕೃಷ್ಣಪ್ರಸಾದ್ ಗರಗ.