<p><strong>ನವದೆಹಲಿ</strong> : ಸರ್ಕಾರ ಕ್ರೀಡಾ ಸಂಕೀರ್ಣಗಳಲ್ಲಿ ತರಬೇತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಭಾರತ ಟೇಬಲ್ ಟೆನಿಸ್ ಫೆಡರೇಷನ್, ತರಬೇತಿ ಶಿಬಿರಕ್ಕೆ ಹಾಜರಾಗಲು ದೇಶದ ಅಗ್ರ 16 ಆಟಗಾರರಿಗೆ ಸಮ್ಮತಿ ಕೇಳಿ ಪತ್ರ ಬರೆದಿದೆ. ಆದರೆ ಕೆಲಕಾಲ ಬೇಕಾಗುತ್ತದೆ ಎಂದು ಆಟಗಾರರು ಹೇಳಿದ್ದಾರೆ.</p>.<p>ಅಗ್ರಮಾನ್ಯ ಆಟಗಾರರಾದ ಶರತ್ ಕಮಲ್, ಜಿ.ಸತ್ಯನ್ ಸೇರಿದಂತೆ ಪ್ರಮುಖ ಆಟಗಾರರು, ‘ಕೊರೊನಾ ಸೋಂಕು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಶ್ರೇಯಸ್ಕರ ಎನಿಸುವುದಿಲ್ಲ’ ಎಂದಿದ್ದಾರೆ. ಆಟಗಾರರಿಗೆ ಎನ್ಐಎಸ್ ಪಟಿಯಾಲ, ಸೋನೆಪತ್ ಮತ್ತು ಕೋಲ್ಕತ್ತದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ.</p>.<p>‘ತಿಂಗಳಾಂತ್ಯದಲ್ಲಿ ಶಿಬಿರಕ್ಕೆ ಸೇರುವಂತೆ ನಮ್ಮನ್ನು ಕೇಳಲಾಗಿದೆ. ಇದು ತುಂಬಾ ಬೇಗ ಎನಿಸಿದೆ. ಸೋಂಕು ಪ್ರಕರಣಗಳು ಹೆಚ್ಚಿದ್ದು, ಕೆಲವೆಡೆ ಪ್ರಯಾಣ ನಿರ್ಬಂಧವೂ ಇದೆ. ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವವರೆಗೆ ತರಬೇತಿಗೆ ಕಾಯವುದು ಉತ್ತಮ’ ಎಂದು ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನ ದಲ್ಲಿರುವ ಶರತ್ ತಿಳಿಸಿದರು.</p>.<p>‘ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ತನ್ನೆಲ್ಲಾ ಚಟುವಟಿಕೆಗಳನ್ನು ಜೂನ್ ಅಂತ್ಯದವರೆಗೆ ಸ್ಥಗಿತಗೊಳಿಸಿದೆ. ಸದ್ಯದಲ್ಲಿ ಯಾವುದೇ ಪೂರ್ವನಿರ್ಧಾರಿತ ಟೂರ್ನಿಗಳಿಲ್ಲ. ಎಲ್ಲ ಆಟಗಾರರು ಒಟ್ಟಿಗೆ ಸೇರಿದರೆ ಒಳ್ಳೆಯದು. ಆದರೆ ಸದ್ಯಕ್ಕಂತೂ ಆದಾಗದು’ ಎಂದಿದ್ದಾರೆ.</p>.<p>ಲಾಕ್ಡೌನ್ ಘೋಷಣೆಯಾದ ದಿನದಿಂದ ಆಟಗಾರರು ಒಂದು ರೀತಿ ‘ಗೃಹ ಬಂಧನ’ದಲ್ಲಿದ್ದಾರೆ. ಕೆಲವು ರಿಯಾಯಿತಿಗಳೊಡನೆ ಸರ್ಕಾರ ಲಾಕ್ಡೌನ್ಅನ್ನು ಮೇ 31ರವರೆಗೆ ವಿಸ್ತರಿಸಿದೆ.</p>.<p>ಪ್ರಸಕ್ತ ಪರಿಸ್ಥಿತಿಯಲ್ಲಿ ತವರಿನಲ್ಲೇ ಅಭ್ಯಾಸ ನಡೆಸಲು ಬಯಸುವುದಾಗಿ ಚೆನ್ನೈನಲ್ಲೇ ನೆಲೆಸಿರುವ ಇನ್ನೊಬ್ಬ ಆಟಗಾರ ಸತ್ಯನ್ ಹೇಳುತ್ತಾರೆ. ‘ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ. ಚೆನ್ನೈನಲ್ಲಿರುವ ರಾಮನ್ ತರಬೇತಿ ಕೇಂದ್ರದಲ್ಲಿ ಕೋಚ್ ರಾಮನ್ ಅವರಿಂದ ತರಬೇತಿ ಪಡೆಯುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದಿದ್ದಾರೆ.</p>.<p>ತರಬೇತಿ ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ಟಿಟಿಎಫ್ಐ ಮಹಾ ಕಾರ್ಯದರ್ಶಿ ಎಂ.ಪಿ.ಸಿಂಗ್ ಅವರು ಸೋಮವಾರ ಬೆಳಿಗ್ಗೆ ಆಟಗಾರರಿಗೆ ಪತ್ರ ಬರೆದಿದ್ದಾರೆ. ಫೆಡರೇಷನ್ ಮುಂದಿನ ವಾರ ಶಿಬಿರ ಆರಂಭಿಸುವ ಇರಾದೆ ಹೊಂದಿದೆ. ಎಂಟು ಆಟಗಾರರು ಮತ್ತು ಇಷ್ಟೇ ಸಂಖ್ಯೆಯ ಆಟಗಾರ್ತಿಯರಿಗೆ ಪತ್ರ ಬರೆಯಲಾಗಿದೆ.</p>.<p>ಆದರೆ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ಆಟಗಾರರು ಒಂದೇ ಸ್ಥಳದಲ್ಲಿ ಹೇಗೆ ಸೇರಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ಪ್ರಮುಖ ಆಟಗಾರ್ತಿ ಮಣಿಕಾ ಬಾತ್ರಾ ಪುಣೆಯಲ್ಲಿದ್ದಾರೆ.</p>.<p>ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ತರಬೇತುದಾರರಾದ ಸೌಮ್ಯದೀಪ ರಾಯ್ ಮತ್ತು ಅರೂಪ್ ಬಸಕ್ ಅವರಿಗೂ ಫೆಡರೇಷನ್ ಪತ್ರ ಬರೆದಿದೆ.</p>.<p><strong>ನಾಮನಿರ್ದೇಶನ:</strong> ಟಿಟಿಎಫ್ಐ, ಈ ಬಾರಿಯ ಅರ್ಜುನ ಪ್ರಶಸ್ತಿಗೆ, ಸನಿಲ್ ಶೆಟ್ಟಿ, ಮಧುರಿಕಾ ಪಾಟ್ಕರ್ ಮತ್ತು ಸುತೀರ್ಥ ಮುಖರ್ಜಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ ಎಂದು ಸಿಂಗ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong> : ಸರ್ಕಾರ ಕ್ರೀಡಾ ಸಂಕೀರ್ಣಗಳಲ್ಲಿ ತರಬೇತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಭಾರತ ಟೇಬಲ್ ಟೆನಿಸ್ ಫೆಡರೇಷನ್, ತರಬೇತಿ ಶಿಬಿರಕ್ಕೆ ಹಾಜರಾಗಲು ದೇಶದ ಅಗ್ರ 16 ಆಟಗಾರರಿಗೆ ಸಮ್ಮತಿ ಕೇಳಿ ಪತ್ರ ಬರೆದಿದೆ. ಆದರೆ ಕೆಲಕಾಲ ಬೇಕಾಗುತ್ತದೆ ಎಂದು ಆಟಗಾರರು ಹೇಳಿದ್ದಾರೆ.</p>.<p>ಅಗ್ರಮಾನ್ಯ ಆಟಗಾರರಾದ ಶರತ್ ಕಮಲ್, ಜಿ.ಸತ್ಯನ್ ಸೇರಿದಂತೆ ಪ್ರಮುಖ ಆಟಗಾರರು, ‘ಕೊರೊನಾ ಸೋಂಕು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಶ್ರೇಯಸ್ಕರ ಎನಿಸುವುದಿಲ್ಲ’ ಎಂದಿದ್ದಾರೆ. ಆಟಗಾರರಿಗೆ ಎನ್ಐಎಸ್ ಪಟಿಯಾಲ, ಸೋನೆಪತ್ ಮತ್ತು ಕೋಲ್ಕತ್ತದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ.</p>.<p>‘ತಿಂಗಳಾಂತ್ಯದಲ್ಲಿ ಶಿಬಿರಕ್ಕೆ ಸೇರುವಂತೆ ನಮ್ಮನ್ನು ಕೇಳಲಾಗಿದೆ. ಇದು ತುಂಬಾ ಬೇಗ ಎನಿಸಿದೆ. ಸೋಂಕು ಪ್ರಕರಣಗಳು ಹೆಚ್ಚಿದ್ದು, ಕೆಲವೆಡೆ ಪ್ರಯಾಣ ನಿರ್ಬಂಧವೂ ಇದೆ. ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವವರೆಗೆ ತರಬೇತಿಗೆ ಕಾಯವುದು ಉತ್ತಮ’ ಎಂದು ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನ ದಲ್ಲಿರುವ ಶರತ್ ತಿಳಿಸಿದರು.</p>.<p>‘ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ತನ್ನೆಲ್ಲಾ ಚಟುವಟಿಕೆಗಳನ್ನು ಜೂನ್ ಅಂತ್ಯದವರೆಗೆ ಸ್ಥಗಿತಗೊಳಿಸಿದೆ. ಸದ್ಯದಲ್ಲಿ ಯಾವುದೇ ಪೂರ್ವನಿರ್ಧಾರಿತ ಟೂರ್ನಿಗಳಿಲ್ಲ. ಎಲ್ಲ ಆಟಗಾರರು ಒಟ್ಟಿಗೆ ಸೇರಿದರೆ ಒಳ್ಳೆಯದು. ಆದರೆ ಸದ್ಯಕ್ಕಂತೂ ಆದಾಗದು’ ಎಂದಿದ್ದಾರೆ.</p>.<p>ಲಾಕ್ಡೌನ್ ಘೋಷಣೆಯಾದ ದಿನದಿಂದ ಆಟಗಾರರು ಒಂದು ರೀತಿ ‘ಗೃಹ ಬಂಧನ’ದಲ್ಲಿದ್ದಾರೆ. ಕೆಲವು ರಿಯಾಯಿತಿಗಳೊಡನೆ ಸರ್ಕಾರ ಲಾಕ್ಡೌನ್ಅನ್ನು ಮೇ 31ರವರೆಗೆ ವಿಸ್ತರಿಸಿದೆ.</p>.<p>ಪ್ರಸಕ್ತ ಪರಿಸ್ಥಿತಿಯಲ್ಲಿ ತವರಿನಲ್ಲೇ ಅಭ್ಯಾಸ ನಡೆಸಲು ಬಯಸುವುದಾಗಿ ಚೆನ್ನೈನಲ್ಲೇ ನೆಲೆಸಿರುವ ಇನ್ನೊಬ್ಬ ಆಟಗಾರ ಸತ್ಯನ್ ಹೇಳುತ್ತಾರೆ. ‘ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ. ಚೆನ್ನೈನಲ್ಲಿರುವ ರಾಮನ್ ತರಬೇತಿ ಕೇಂದ್ರದಲ್ಲಿ ಕೋಚ್ ರಾಮನ್ ಅವರಿಂದ ತರಬೇತಿ ಪಡೆಯುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದಿದ್ದಾರೆ.</p>.<p>ತರಬೇತಿ ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ಟಿಟಿಎಫ್ಐ ಮಹಾ ಕಾರ್ಯದರ್ಶಿ ಎಂ.ಪಿ.ಸಿಂಗ್ ಅವರು ಸೋಮವಾರ ಬೆಳಿಗ್ಗೆ ಆಟಗಾರರಿಗೆ ಪತ್ರ ಬರೆದಿದ್ದಾರೆ. ಫೆಡರೇಷನ್ ಮುಂದಿನ ವಾರ ಶಿಬಿರ ಆರಂಭಿಸುವ ಇರಾದೆ ಹೊಂದಿದೆ. ಎಂಟು ಆಟಗಾರರು ಮತ್ತು ಇಷ್ಟೇ ಸಂಖ್ಯೆಯ ಆಟಗಾರ್ತಿಯರಿಗೆ ಪತ್ರ ಬರೆಯಲಾಗಿದೆ.</p>.<p>ಆದರೆ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ಆಟಗಾರರು ಒಂದೇ ಸ್ಥಳದಲ್ಲಿ ಹೇಗೆ ಸೇರಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ಪ್ರಮುಖ ಆಟಗಾರ್ತಿ ಮಣಿಕಾ ಬಾತ್ರಾ ಪುಣೆಯಲ್ಲಿದ್ದಾರೆ.</p>.<p>ಶಿಬಿರಕ್ಕೆ ಲಭ್ಯತೆ ಕುರಿತು ತಿಳಿಸುವಂತೆ ತರಬೇತುದಾರರಾದ ಸೌಮ್ಯದೀಪ ರಾಯ್ ಮತ್ತು ಅರೂಪ್ ಬಸಕ್ ಅವರಿಗೂ ಫೆಡರೇಷನ್ ಪತ್ರ ಬರೆದಿದೆ.</p>.<p><strong>ನಾಮನಿರ್ದೇಶನ:</strong> ಟಿಟಿಎಫ್ಐ, ಈ ಬಾರಿಯ ಅರ್ಜುನ ಪ್ರಶಸ್ತಿಗೆ, ಸನಿಲ್ ಶೆಟ್ಟಿ, ಮಧುರಿಕಾ ಪಾಟ್ಕರ್ ಮತ್ತು ಸುತೀರ್ಥ ಮುಖರ್ಜಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದೆ ಎಂದು ಸಿಂಗ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>