‘ಸಂಜಯ್ ಪ್ರತಾಪ್ ಸಿಂಗ್, ಅನೂಜ್ ಕುಮಾರ್ ಮತ್ತು ರವಿ ಬಂಧಿತರು. ಆಗ್ರಾದ ಸಂಜಯ್ ಈ ಹಿಂದೆ ಕಬಡ್ಡಿ ಆಟಗಾರ ಆಗಿದ್ದರು. ರುದ್ರ ಪ್ರತಾಪ್ ಸಿಂಗ್ ಎಂಬ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿ ಕ್ರೀಡಾಪಟುಗಳನ್ನು ಸಂಪರ್ಕಿಸುತ್ತಿದ್ದರು. ಉತ್ತರ ಪ್ರದೇಶದ ವಿವಿಧ ಕಡೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವ ಅನೂಜ್ ಮತ್ತು ರವಿ ತಮ್ಮ ಖಾತೆ ಸಂಖ್ಯೆಯನ್ನು ನೀಡಿ ಹಣ ಜಮೆ ಮಾಡುವಂತೆ ತಿಳಿಸುತ್ತಿದ್ದರು. ಈ ಖಾತೆಗಳನ್ನು ಈಗ ನಿಷ್ಕ್ರಿಯಗೊಳಿಸಲಾಗಿದ್ದು ತನಿಖೆ ನಡೆಯುತ್ತಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.