<p><strong>ನವದೆಹಲಿ</strong>: ಅನಿಲ್ ಜೈನ್ ಅವರ ಕೆಲವು ಗ್ರ್ಯಾನ್ಸ್ಲಾಮ್ ಟೂರ್ನಿ ಪ್ರವಾಸಗಳಿಗೆ ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ₹1 ಕೋಟಿಗೂ ಹೆಚ್ಚು ಹಣವನ್ನು ಅನವಶ್ಯಕವಾಗಿ ಖರ್ಚು ಮಾಡಿದೆ ಎಂದು ಫೆಡರೇಷನ್ನ ಹಣಕಾಸು ಸಮಿತಿ ಸದಸ್ಯ ಹಿರಣ್ಮೊಯ್ ಚಟರ್ಜಿ ಮಂಗಳವಾರ ಆಪಾದಿಸಿದ್ದಾರೆ.</p><p>ಪತ್ನಿ ಜೊತೆಗೂ ಕೆಲವು ಟೂರ್ನಿಗಳಿಗೆ ಜೈನ್ ತೆರಳಿದ್ದರು ಎಂದೂ ಆರೋಪಿಸಿದ್ದಾರೆ. ಆದರೆ ಅವರ ಆರೋಪಗಳನ್ನು ಫೆಡರೇಷನ್ ಅಧ್ಯಕ್ಷ ಅನಿಲ್ ಜೈನ್ ತಳ್ಳಿ ಹಾಕಿದ್ದಾರೆ. ಪತ್ನಿಯ ಜೊತೆ ಪ್ರವಾಸಕ್ಕೆ ತಮಗೆ ಅವಕಾಶ ಇರುವುದಾಗಿ ಹೇಳಿದ್ದಾರೆ.</p><p>2024ರ ಸೆಪ್ಟೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರ ವಿರುದ್ಧವೇ ಎಐಟಿಎ ಅಧ್ಯಕ್ಷರು ಕೆಲಸ ಮಾಡಿದ್ದರು. ಹೀಗಾಗಿ ಐಎಟಿಎ ಅಂಗಸಂಸ್ಥೆಗಳು ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದವು ಎಂದು ಚಟರ್ಜಿ ಹೇಳಿದ್ದಾರೆ.</p><p>ಪದಾಧಿಕಾರಿಗಳ ವಿದೇಶ ಪ್ರವಾಸಗಳಿಗೆ ಭತ್ಯೆಯನ್ನು ವಿತ್ತ ಸಮಿತಿಯು 2022ರ ಮೇ ತಿಂಗಳಲ್ಲಿ ಹೆಚ್ಚಿಸಿತ್ತು. ಆದರೆ ಇದಕ್ಕೆ ಕಾರ್ಯಕಾರಿ ಸಮಿತಿ ಅನುಮೋದನೆಯನ್ನು ಪಡೆದಿರಲಿಲ್ಲ ಎಂದು ಎಐಟಿಎ ಉಪಾಧ್ಯಕ್ಷರೂ (ಕ್ರೀಡೆ) ಆಗಿರುವ ಚಟರ್ಜಿ ಹೇಳಿದ್ದಾರೆ. ಸಮಿತಿ ಸದಸ್ಯರಾಗಿದ್ದರೂ ತಮಗೆ ಆ ಸಭೆಗೆ ಆಹ್ವಾನಿಸಿರಲಿಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಅನಿಲ್ ಜೈನ್ ಅವರ ಕೆಲವು ಗ್ರ್ಯಾನ್ಸ್ಲಾಮ್ ಟೂರ್ನಿ ಪ್ರವಾಸಗಳಿಗೆ ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ₹1 ಕೋಟಿಗೂ ಹೆಚ್ಚು ಹಣವನ್ನು ಅನವಶ್ಯಕವಾಗಿ ಖರ್ಚು ಮಾಡಿದೆ ಎಂದು ಫೆಡರೇಷನ್ನ ಹಣಕಾಸು ಸಮಿತಿ ಸದಸ್ಯ ಹಿರಣ್ಮೊಯ್ ಚಟರ್ಜಿ ಮಂಗಳವಾರ ಆಪಾದಿಸಿದ್ದಾರೆ.</p><p>ಪತ್ನಿ ಜೊತೆಗೂ ಕೆಲವು ಟೂರ್ನಿಗಳಿಗೆ ಜೈನ್ ತೆರಳಿದ್ದರು ಎಂದೂ ಆರೋಪಿಸಿದ್ದಾರೆ. ಆದರೆ ಅವರ ಆರೋಪಗಳನ್ನು ಫೆಡರೇಷನ್ ಅಧ್ಯಕ್ಷ ಅನಿಲ್ ಜೈನ್ ತಳ್ಳಿ ಹಾಕಿದ್ದಾರೆ. ಪತ್ನಿಯ ಜೊತೆ ಪ್ರವಾಸಕ್ಕೆ ತಮಗೆ ಅವಕಾಶ ಇರುವುದಾಗಿ ಹೇಳಿದ್ದಾರೆ.</p><p>2024ರ ಸೆಪ್ಟೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರ ವಿರುದ್ಧವೇ ಎಐಟಿಎ ಅಧ್ಯಕ್ಷರು ಕೆಲಸ ಮಾಡಿದ್ದರು. ಹೀಗಾಗಿ ಐಎಟಿಎ ಅಂಗಸಂಸ್ಥೆಗಳು ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದವು ಎಂದು ಚಟರ್ಜಿ ಹೇಳಿದ್ದಾರೆ.</p><p>ಪದಾಧಿಕಾರಿಗಳ ವಿದೇಶ ಪ್ರವಾಸಗಳಿಗೆ ಭತ್ಯೆಯನ್ನು ವಿತ್ತ ಸಮಿತಿಯು 2022ರ ಮೇ ತಿಂಗಳಲ್ಲಿ ಹೆಚ್ಚಿಸಿತ್ತು. ಆದರೆ ಇದಕ್ಕೆ ಕಾರ್ಯಕಾರಿ ಸಮಿತಿ ಅನುಮೋದನೆಯನ್ನು ಪಡೆದಿರಲಿಲ್ಲ ಎಂದು ಎಐಟಿಎ ಉಪಾಧ್ಯಕ್ಷರೂ (ಕ್ರೀಡೆ) ಆಗಿರುವ ಚಟರ್ಜಿ ಹೇಳಿದ್ದಾರೆ. ಸಮಿತಿ ಸದಸ್ಯರಾಗಿದ್ದರೂ ತಮಗೆ ಆ ಸಭೆಗೆ ಆಹ್ವಾನಿಸಿರಲಿಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>