<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಕ್ರೀಡಾಂಗಣವು ಶುಕ್ರವಾರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕಬ್ಬನ್ ಪಾರ್ಕ್ನಲ್ಲಿರುವ ಸಂಸ್ಥೆಯ ಕೋರ್ಟ್ಗೆ ಗಣ್ಯರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಹೆಸರನ್ನು ಇಡಲಾಯಿತು.</p><p>ಸಂಸ್ಥೆಯನ್ನು ಎರಡು ದಶಕಗಳ ಕಾಲ ಮುನ್ನಡೆಸಿದ್ದ ಕೃಷ್ಣ ಅವರ ಕೊಡುಗೆಯನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಕೆಎಸ್ಎಲ್ಟಿಎ ಸರ್ವಾನುಮತ ದಿಂದ ಈ ನಿರ್ಧಾರ ಕೈಗೊಂಡಿದೆ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರಾದ ಮಾಳವಿಕಾ ಮತ್ತು ಶಾಂಭವಿ ಅವರ ಸಮ್ಮುಖದಲ್ಲಿ ‘ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣ ಬೆಂಗಳೂರು’ ಎಂದು ನಾಮಕರಣ ಮಾಡಲಾಯಿತು.</p><p>‘ಕೃಷ್ಣ ಅವರ ದೂರದೃಷ್ಟಿಯಿಂದಾಗಿ ರಾಜಧಾನಿಯ ಕೇಂದ್ರಭಾಗದಲ್ಲೇ ಸುಸಜ್ಜಿತ ಟೆನಿಸ್ ಕೋರ್ಟ್ 26 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅವರು ಈ ಸಂಸ್ಥೆಯ ಅಭಿವೃದ್ಧಿಯ ರೂವಾರಿಯಾಗಿದ್ದು, ಅವರ ಹೆಸರನ್ನು ಯಾವುದೇ ಒತ್ತಡವಿಲ್ಲದೆ, ಮನಪೂರ್ವಕ ವಾಗಿ ಇಡಲಾಗಿದೆ’ ಎಂದು ಕೆಎಸ್ಎಲ್ಟಿಎ ಅಧ್ಯಕ್ಷ, ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ ಅಭಿಪ್ರಾಯಪಟ್ಟರು.</p><p>‘ಅಧಿಕಾರವಿದ್ದಾಗ ಒಂದು ಸಂಸ್ಥೆಗೆ ಮನಸ್ಫೂರ್ತಿಯಾಗಿ ಕೆಲಸ ಮಾಡಿದರೆ ಏನು ಸಾಧಿಸಬಹುದು ಎಂಬುದಕ್ಕೆ ಕೃಷ್ಣ ಅವರು ಇಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಉತ್ತಮ ಉದಾಹರಣೆ. ಅವರ ಮಾತಿನಲ್ಲಿ ತೂಕ, ಹಿಡಿತವಿತ್ತು. ಆದರೆ, ಇಂದಿನ ರಾಜಕಾರಣಿಗಳ ಮಾತಿನಲ್ಲಿ ಹಿಡಿತಕ್ಕಿಂತ<br>ಹೊಡೆತಗಳೇ ಹೆಚ್ಚು ಇರುತ್ತವೆ’ ಎಂದು ಹೇಳಿದರು.</p><p>‘ಬೆಂಗಳೂರಿನಲ್ಲಿ ಮತ್ತೊಂದು ಅಂತರರಾಷ್ಟ್ರೀಯ ದರ್ಜೆಯ ಟೆನಿಸ್ ಕೋರ್ಟ್ ನಿರ್ಮಿಸುವ ಗುರಿಯನ್ನು ಕೆಎಸ್ಎಲ್ಟಿಎ ಸಂಸ್ಥೆ ಹೊಂದಿದೆ. ಇದಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏಳು ಎಕರೆ ಜಾಗ ಮಂಜೂರಾಗಿದೆ. ಅಲ್ಲದೆ, ಈ ವರ್ಷದಿಂದ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.</p><p>‘ಕೃಷ್ಣ ಅವರು ರಾಜಕಾರಣದಷ್ಟೇ ಮಹತ್ವವನ್ನು ಟೆನಿಸ್ ಮತ್ತು ಸಂಗೀತಕ್ಕೆ ನೀಡಿದ್ದರು. ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಟೆನಿಸ್ ಮತ್ತು ಸಂಗೀತದಲ್ಲಿ ಮಗ್ನರಾಗುತ್ತಿದ್ದರು. ಪಾರ್ಲಿಮೆಂಟ್ ಚುನಾವಣೆ ಫಲಿತಾಂಶದ ದಿನ ಅವರಿದ್ದ ಪಕ್ಷವು ಸೋಲುತ್ತಿದ್ದಂತೆ ಟೆನಿಸ್ ಆಡಲು<br>ಹೊರಟು ನಿಂತಿದ್ದರು. ಟೆನಿಸ್ ಅವರ ಮೇಲೆ ಅಷ್ಟೊಂದು ಗಾಢ ಪ್ರಭಾವ ಬೀರಿತ್ತು’ ಎಂದು ಪ್ರೇಮಾ ಕೃಷ್ಣ ಸ್ಮರಿಸಿದರು.</p><p><strong>ಟ್ರೋಫಿ ಅನಾವರಣ: </strong></p><p><strong>ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥ ಐಟಿಎಫ್ ವಿಶ್ವ ಟೆನಿಸ್ ಟೂರ್ ಪುರುಷರ ಎಂ25 ಟೂರ್ನಿ ಇದೇ 31ರಿಂದ ಏ.6ರವರೆಗೆ ನಡೆಯಲಿದ್ದು, ಇದರ ಟ್ರೋಫಿಯನ್ನು ಆರ್.ಅಶೋಕ ಅನಾವರಣ ಮಾಡಿದರು. ಟೂರ್ನಿಯು ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಕ್ರೀಡಾಂಗಣವು ಶುಕ್ರವಾರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕಬ್ಬನ್ ಪಾರ್ಕ್ನಲ್ಲಿರುವ ಸಂಸ್ಥೆಯ ಕೋರ್ಟ್ಗೆ ಗಣ್ಯರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಹೆಸರನ್ನು ಇಡಲಾಯಿತು.</p><p>ಸಂಸ್ಥೆಯನ್ನು ಎರಡು ದಶಕಗಳ ಕಾಲ ಮುನ್ನಡೆಸಿದ್ದ ಕೃಷ್ಣ ಅವರ ಕೊಡುಗೆಯನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಕೆಎಸ್ಎಲ್ಟಿಎ ಸರ್ವಾನುಮತ ದಿಂದ ಈ ನಿರ್ಧಾರ ಕೈಗೊಂಡಿದೆ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರಾದ ಮಾಳವಿಕಾ ಮತ್ತು ಶಾಂಭವಿ ಅವರ ಸಮ್ಮುಖದಲ್ಲಿ ‘ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣ ಬೆಂಗಳೂರು’ ಎಂದು ನಾಮಕರಣ ಮಾಡಲಾಯಿತು.</p><p>‘ಕೃಷ್ಣ ಅವರ ದೂರದೃಷ್ಟಿಯಿಂದಾಗಿ ರಾಜಧಾನಿಯ ಕೇಂದ್ರಭಾಗದಲ್ಲೇ ಸುಸಜ್ಜಿತ ಟೆನಿಸ್ ಕೋರ್ಟ್ 26 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅವರು ಈ ಸಂಸ್ಥೆಯ ಅಭಿವೃದ್ಧಿಯ ರೂವಾರಿಯಾಗಿದ್ದು, ಅವರ ಹೆಸರನ್ನು ಯಾವುದೇ ಒತ್ತಡವಿಲ್ಲದೆ, ಮನಪೂರ್ವಕ ವಾಗಿ ಇಡಲಾಗಿದೆ’ ಎಂದು ಕೆಎಸ್ಎಲ್ಟಿಎ ಅಧ್ಯಕ್ಷ, ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ ಅಭಿಪ್ರಾಯಪಟ್ಟರು.</p><p>‘ಅಧಿಕಾರವಿದ್ದಾಗ ಒಂದು ಸಂಸ್ಥೆಗೆ ಮನಸ್ಫೂರ್ತಿಯಾಗಿ ಕೆಲಸ ಮಾಡಿದರೆ ಏನು ಸಾಧಿಸಬಹುದು ಎಂಬುದಕ್ಕೆ ಕೃಷ್ಣ ಅವರು ಇಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಉತ್ತಮ ಉದಾಹರಣೆ. ಅವರ ಮಾತಿನಲ್ಲಿ ತೂಕ, ಹಿಡಿತವಿತ್ತು. ಆದರೆ, ಇಂದಿನ ರಾಜಕಾರಣಿಗಳ ಮಾತಿನಲ್ಲಿ ಹಿಡಿತಕ್ಕಿಂತ<br>ಹೊಡೆತಗಳೇ ಹೆಚ್ಚು ಇರುತ್ತವೆ’ ಎಂದು ಹೇಳಿದರು.</p><p>‘ಬೆಂಗಳೂರಿನಲ್ಲಿ ಮತ್ತೊಂದು ಅಂತರರಾಷ್ಟ್ರೀಯ ದರ್ಜೆಯ ಟೆನಿಸ್ ಕೋರ್ಟ್ ನಿರ್ಮಿಸುವ ಗುರಿಯನ್ನು ಕೆಎಸ್ಎಲ್ಟಿಎ ಸಂಸ್ಥೆ ಹೊಂದಿದೆ. ಇದಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏಳು ಎಕರೆ ಜಾಗ ಮಂಜೂರಾಗಿದೆ. ಅಲ್ಲದೆ, ಈ ವರ್ಷದಿಂದ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.</p><p>‘ಕೃಷ್ಣ ಅವರು ರಾಜಕಾರಣದಷ್ಟೇ ಮಹತ್ವವನ್ನು ಟೆನಿಸ್ ಮತ್ತು ಸಂಗೀತಕ್ಕೆ ನೀಡಿದ್ದರು. ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಟೆನಿಸ್ ಮತ್ತು ಸಂಗೀತದಲ್ಲಿ ಮಗ್ನರಾಗುತ್ತಿದ್ದರು. ಪಾರ್ಲಿಮೆಂಟ್ ಚುನಾವಣೆ ಫಲಿತಾಂಶದ ದಿನ ಅವರಿದ್ದ ಪಕ್ಷವು ಸೋಲುತ್ತಿದ್ದಂತೆ ಟೆನಿಸ್ ಆಡಲು<br>ಹೊರಟು ನಿಂತಿದ್ದರು. ಟೆನಿಸ್ ಅವರ ಮೇಲೆ ಅಷ್ಟೊಂದು ಗಾಢ ಪ್ರಭಾವ ಬೀರಿತ್ತು’ ಎಂದು ಪ್ರೇಮಾ ಕೃಷ್ಣ ಸ್ಮರಿಸಿದರು.</p><p><strong>ಟ್ರೋಫಿ ಅನಾವರಣ: </strong></p><p><strong>ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥ ಐಟಿಎಫ್ ವಿಶ್ವ ಟೆನಿಸ್ ಟೂರ್ ಪುರುಷರ ಎಂ25 ಟೂರ್ನಿ ಇದೇ 31ರಿಂದ ಏ.6ರವರೆಗೆ ನಡೆಯಲಿದ್ದು, ಇದರ ಟ್ರೋಫಿಯನ್ನು ಆರ್.ಅಶೋಕ ಅನಾವರಣ ಮಾಡಿದರು. ಟೂರ್ನಿಯು ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>