ಸರ್ಬಿಯಾ ಎದುರಿನ ಡೇವಿಸ್ ಕಪ್ ಟೂರ್ನಿ ಇದೇ 14ರಿಂದ 16ರ ವರೆಗೆ ನಡೆಯಲಿದೆ. ಭುಜದಲ್ಲಿ ಗಾಯವಾಗಿರುವ ಕಾರಣ ಟೂರ್ನಿಯಿಂದ ದಿವಿಜ್ ಶರಣ್ ಅವರು ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಬಾಲಾಜಿಗೆ ಸ್ಥಾನ ನೀಡಲಾಗಿದೆ. ಯೂಕಿ ಭಾಂಬ್ರಿ ಜೊತೆ ಆಡಬೇಕಾಗಿದ್ದ ಸುಮಿತ್ ನಗಾಲ್ ಅವರು ಹಿಂದೆ ಸರಿದ ಕಾರಣ ಸಾಕೇತ್ ಮೈನೇನಿಗೆ ಸ್ಥಾನ ನೀಡಲಾಗಿದೆ.