<p><strong>ಬೆಂಗಳೂರು: </strong>ಕರ್ನಾಟಕದ ಆಟಗಾರರಾದ ಬಿ.ಆರ್. ನಿಕ್ಷೇಪ್ ಮತ್ತು ತಥಾಗತ್ ಚರಂತಿಮಠ ಅವರು ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಆಯೋಜಿಸುತ್ತಿರುವ ಐಟಿಎಫ್ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ.</p>.<p>ಭಾನುವಾರಅರ್ಹತಾ ಸುತ್ತಿನ ಪಂದ್ಯಗಳೊಂದಿಗೆ ಟೂರ್ನಿಯು ಆರಂಭವಾಗಲಿದೆ. ಭಾರತದ ಮಾಜಿ ಜೂನಿಯರ್ ಅಗ್ರಕ್ರಮಾಂಕದ ಆಟಗಾರ ನಿಕ್ಷೇಪ್ ಜೊತೆಗೆ ಡೇವಿಸ್ ಕಪ್ ಟೂರ್ನಿಯಲ್ಲಿ ಆಡಿದ್ದ ವಿಷ್ಣುವರ್ಧನ್, ಅನಿರುದ್ಧ ಚಂದ್ರಶೇಖರ್ ಅವರಿಗೂ ವೈಲ್ಡ್ಕಾರ್ಡ್ ಲಭಿಸಿದೆ.</p>.<p>ಈ ನಾಲ್ವರು ಆಟಗಾರರು ಎಂಟು ಮಂದಿ ಕ್ವಾಲಿಫೈಯರ್ಸ್ ಮತ್ತು ಮುಖ್ಯ ಸುತ್ತಿನಲ್ಲಿರುವ 20 ಮಂದಿಯನ್ನು ಸೇರಿಕೊಳ್ಳಲಿದ್ದಾರೆ. ನಿಕ್ಷೇಪ್ ಮತ್ತು ತಥಾಗತ್ ಅವರು ಮೊದಲ ಬಾರಿ ಐಟಿಎಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.</p>.<p>‘ತವರು ನೆಲದಲ್ಲಿ ಮೊದಲ ಬಾರಿ ಐಟಿಎಫ್ ಟೂರ್ನಿಯಲ್ಲಿ ಆಡುವುದಕ್ಕೆ ಕಾತರನಾಗಿದ್ದೇನೆ. ಅವಕಾಶ ನೀಡಿದ ಕೆಎಸ್ಎಲ್ಟಿಎಗೆ ಕೃತಜ್ಞತೆಗಳು‘ ಎಂದು 24 ವರ್ಷದ ನಿಕ್ಷೇಪ್ ಹೇಳಿದ್ದಾರೆ.</p>.<p>‘ಕೆಲವು ಪ್ರಮುಖ ಆಟಗಾರರನ್ನು ಹೊರತುಪಡಿಸಿ ಎಲ್ಲರೂ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಶ್ರೇಷ್ಠ ಆಟಗಾರರೊಡನೆ ಅಂಗಣಕ್ಕಿಳಿಯುತ್ತಿರುವುದಕ್ಕೆ ಉತ್ಸುಕನಾಗಿರುವೆ‘ ಎಂದು ತಥಾಗತ್ ಹೇಳಿದ್ದಾರೆ.</p>.<p>ಇತ್ತೀಚೆಗೆ ಎರಡು ಲೆಗ್ಗಳ ಬೆಂಗಳೂರು ಓಪನ್ ಬಳಿಕ ಮೂರನೇ ಟೂರ್ನಿಯು ಉದ್ಯಾನಗರಿಯಲ್ಲಿ ನಡೆಯುತ್ತಿದೆ. ಒಟ್ಟು ₹ 11.44 ಲಕ್ಷ ಬಹುಮಾನ ಮೊತ್ತದ ಟೂರ್ನಿ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕದ ಆಟಗಾರರಾದ ಬಿ.ಆರ್. ನಿಕ್ಷೇಪ್ ಮತ್ತು ತಥಾಗತ್ ಚರಂತಿಮಠ ಅವರು ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಆಯೋಜಿಸುತ್ತಿರುವ ಐಟಿಎಫ್ ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ.</p>.<p>ಭಾನುವಾರಅರ್ಹತಾ ಸುತ್ತಿನ ಪಂದ್ಯಗಳೊಂದಿಗೆ ಟೂರ್ನಿಯು ಆರಂಭವಾಗಲಿದೆ. ಭಾರತದ ಮಾಜಿ ಜೂನಿಯರ್ ಅಗ್ರಕ್ರಮಾಂಕದ ಆಟಗಾರ ನಿಕ್ಷೇಪ್ ಜೊತೆಗೆ ಡೇವಿಸ್ ಕಪ್ ಟೂರ್ನಿಯಲ್ಲಿ ಆಡಿದ್ದ ವಿಷ್ಣುವರ್ಧನ್, ಅನಿರುದ್ಧ ಚಂದ್ರಶೇಖರ್ ಅವರಿಗೂ ವೈಲ್ಡ್ಕಾರ್ಡ್ ಲಭಿಸಿದೆ.</p>.<p>ಈ ನಾಲ್ವರು ಆಟಗಾರರು ಎಂಟು ಮಂದಿ ಕ್ವಾಲಿಫೈಯರ್ಸ್ ಮತ್ತು ಮುಖ್ಯ ಸುತ್ತಿನಲ್ಲಿರುವ 20 ಮಂದಿಯನ್ನು ಸೇರಿಕೊಳ್ಳಲಿದ್ದಾರೆ. ನಿಕ್ಷೇಪ್ ಮತ್ತು ತಥಾಗತ್ ಅವರು ಮೊದಲ ಬಾರಿ ಐಟಿಎಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.</p>.<p>‘ತವರು ನೆಲದಲ್ಲಿ ಮೊದಲ ಬಾರಿ ಐಟಿಎಫ್ ಟೂರ್ನಿಯಲ್ಲಿ ಆಡುವುದಕ್ಕೆ ಕಾತರನಾಗಿದ್ದೇನೆ. ಅವಕಾಶ ನೀಡಿದ ಕೆಎಸ್ಎಲ್ಟಿಎಗೆ ಕೃತಜ್ಞತೆಗಳು‘ ಎಂದು 24 ವರ್ಷದ ನಿಕ್ಷೇಪ್ ಹೇಳಿದ್ದಾರೆ.</p>.<p>‘ಕೆಲವು ಪ್ರಮುಖ ಆಟಗಾರರನ್ನು ಹೊರತುಪಡಿಸಿ ಎಲ್ಲರೂ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಶ್ರೇಷ್ಠ ಆಟಗಾರರೊಡನೆ ಅಂಗಣಕ್ಕಿಳಿಯುತ್ತಿರುವುದಕ್ಕೆ ಉತ್ಸುಕನಾಗಿರುವೆ‘ ಎಂದು ತಥಾಗತ್ ಹೇಳಿದ್ದಾರೆ.</p>.<p>ಇತ್ತೀಚೆಗೆ ಎರಡು ಲೆಗ್ಗಳ ಬೆಂಗಳೂರು ಓಪನ್ ಬಳಿಕ ಮೂರನೇ ಟೂರ್ನಿಯು ಉದ್ಯಾನಗರಿಯಲ್ಲಿ ನಡೆಯುತ್ತಿದೆ. ಒಟ್ಟು ₹ 11.44 ಲಕ್ಷ ಬಹುಮಾನ ಮೊತ್ತದ ಟೂರ್ನಿ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>