<p><strong>ಮೆಲ್ಬರ್ನ್</strong> : ಭಾರತದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮುಖ್ಯ ಡ್ರಾ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಅಂತಿಮ ಸುತ್ತಿನ ಕ್ವಾಲಿಫೈಯರ್ ಪಂದ್ಯದಲ್ಲಿ ಅವರು ಲಾತ್ವಿಯಾದ ಅರ್ನೆಸ್ಟ್ಸ್ ಗುಲ್ಬಿಸ್ ಎದುರು ನೇರ ಸೆಟ್ಗಳಿಂದ ಸೋತರು.</p>.<p>ಕ್ವಾಲಿಫೈಯರ್ಸ್ನಲ್ಲಿ 17ನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ, 6–7, 2–6ರಿಂದ ಗುಲ್ಬಿಸ್ ವಿರುದ್ಧ ಪರಾಭವಗೊಂಡರು.</p>.<p>ತೀವ್ರ ಜಿದ್ದಾಜಿದ್ದಿ ಕಂಡುಬಂದ ಮೊದಲ ಸೆಟ್ ಟೈಬ್ರೇಕ್ವರೆಗೂ ಸಾಗಿತ್ತು. ಆದರೆ ಆರಂಭದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಜ್ಞೇಶ್ ವಿಫಲರಾದರು. ಆದರೆ ಎರಡನೇ ಸೆಟ್ನಲ್ಲಿ ಗುಲ್ಬಿಸ್ ಪೂರ್ಣ ಪಾರಮ್ಯ ಮೆರೆದರು. ಒಂದು ತಾಸು 20 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.</p>.<p>ಪ್ರಜ್ಚೇಶ್ ನಿರ್ಗಮನದೊಂದಿಗೆ ಸಿಂಗಲ್ಸ್ ಕ್ವಾಲಿಫೈಯರ್ಸ್ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.</p>.<p>ಸುಮಿತ್ ನಗಾಲ್ ಅವರು ಗುರುವಾರ ಈಜಿಪ್ಟ್ನ ಮೊಹಮ್ಮದ್ ಸಫ್ವಾತ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋತಿದ್ದರು. ರಾಮಕುಮಾರ್ ರಾಮನಾಥನ್ ಹಾಗೂ ಅಂಕಿತಾ ರೈನಾ ಅವರ ಅಭಿಯಾನ ಮಂಗಳವಾರ ಮೊದಲ ಸುತ್ತಿನಲ್ಲೇ ಕೊನೆಗೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್</strong> : ಭಾರತದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮುಖ್ಯ ಡ್ರಾ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಅಂತಿಮ ಸುತ್ತಿನ ಕ್ವಾಲಿಫೈಯರ್ ಪಂದ್ಯದಲ್ಲಿ ಅವರು ಲಾತ್ವಿಯಾದ ಅರ್ನೆಸ್ಟ್ಸ್ ಗುಲ್ಬಿಸ್ ಎದುರು ನೇರ ಸೆಟ್ಗಳಿಂದ ಸೋತರು.</p>.<p>ಕ್ವಾಲಿಫೈಯರ್ಸ್ನಲ್ಲಿ 17ನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ, 6–7, 2–6ರಿಂದ ಗುಲ್ಬಿಸ್ ವಿರುದ್ಧ ಪರಾಭವಗೊಂಡರು.</p>.<p>ತೀವ್ರ ಜಿದ್ದಾಜಿದ್ದಿ ಕಂಡುಬಂದ ಮೊದಲ ಸೆಟ್ ಟೈಬ್ರೇಕ್ವರೆಗೂ ಸಾಗಿತ್ತು. ಆದರೆ ಆರಂಭದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಜ್ಞೇಶ್ ವಿಫಲರಾದರು. ಆದರೆ ಎರಡನೇ ಸೆಟ್ನಲ್ಲಿ ಗುಲ್ಬಿಸ್ ಪೂರ್ಣ ಪಾರಮ್ಯ ಮೆರೆದರು. ಒಂದು ತಾಸು 20 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.</p>.<p>ಪ್ರಜ್ಚೇಶ್ ನಿರ್ಗಮನದೊಂದಿಗೆ ಸಿಂಗಲ್ಸ್ ಕ್ವಾಲಿಫೈಯರ್ಸ್ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.</p>.<p>ಸುಮಿತ್ ನಗಾಲ್ ಅವರು ಗುರುವಾರ ಈಜಿಪ್ಟ್ನ ಮೊಹಮ್ಮದ್ ಸಫ್ವಾತ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋತಿದ್ದರು. ರಾಮಕುಮಾರ್ ರಾಮನಾಥನ್ ಹಾಗೂ ಅಂಕಿತಾ ರೈನಾ ಅವರ ಅಭಿಯಾನ ಮಂಗಳವಾರ ಮೊದಲ ಸುತ್ತಿನಲ್ಲೇ ಕೊನೆಗೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>