ಬೆಂಗಳೂರು: ಅಮೋಘ ಆಟ ಮುಂದುವರಿಸಿರುವ ಸೆಹಜ್ ಸಿಂಗ್ ಪವಾರ್ ಇಲ್ಲಿನ ಫಾರ್ಚೂನ್ ಸ್ಪೋರ್ಟ್ಸ್ ಆಕಾಡೆಮಿಯ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಟೆನಿಸ್ ಸಂಸ್ಥೆಯ ಎಫ್ಎಸ್ಎ ಎಐಟಿಎ 18 ವರ್ಷದೊಳಗಿನವರ ಚಾಂಪಿಯನ್ಷಿಪ್ನ ಸೆಮಿಫೈನಲ್ ಪ್ರವೇಶಿಸಿದರು.
ಬುಧವಾರ ನಡೆದ ಪಂದ್ಯದಲ್ಲಿ ಸೆಹಜ್ 6-3, 6-2ರಲ್ಲಿ ಅರ್ಜುನ್ ಪ್ರೇಮ್ ಕುಮಾರ್ ವಿರುದ್ಧ ಜಯ ಸಾಧಿಸಿದರು. ಪ್ರಮುಖ ಆಟಗಾರರು ಸೋತು ಹೊರಬಿದ್ದರು.
ಪ್ರೀ ಕ್ವಾರ್ಟ್ ಫೈನಲ್ನಲ್ಲಿ ಐದನೇ ಶ್ರೇಯಾಂಕದ ತೆಲಂಗಾಣದ ಶಿವ ಶಂಕರ್ ಅವರನ್ನು ಮಣಿಸಿದ ಚರಣ್ ವರ್ಧಮ್ ಕ್ವಾರ್ಟರ್ ಫೈನಲ್ನಲ್ಲಿ ಶುಶಾಂಕ ಬುಡ್ಲ ಎದುರು7-5, 3-6, 10-7ರಲ್ಲಿ ಜಯ ಸಾಧಿಸಿದರು.
ವೇದಾಂತ್ ರೆಡ್ಡಿಯಾರ್6-2, 6-2ರಲ್ಲಿ ಆದಿತ್ಯ ಅನಿರುದ್ಧ ವಿರುದ್ದ ಮತ್ತು ಅರಿಹಂತ್ ಕೌಲ್6-4, 6-2ರಲ್ಲಿ ಸಿದ್ಧಾಂತ್ ಶಾಸ್ತ್ರಿ ವಿರುದ್ಧ ಗೆದ್ದರು.
ಬಾಲಕಿಯರ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಸಂಜಿತಾ ರಮೇಶ್ ವಿರುದ್ಧ ಗುರ್ಲೀನ್4-6, 5-7ರಲ್ಲಿ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿದರು. ಮಹಾರಾಷ್ಟ್ರದ ಯಶ್ ಅಜಿತ್ ದೇಸಾಯಿ ಮೂರನೇ ಶ್ರೇಯಾಂಕದ ಆತ್ಮಿಕ ಶ್ರೀನಿವಾಸ್ ಅವರನ್ನು 3-6, 7-5, 12-10ರಲ್ಲಿ ಮಣಿಸಿದರು.
ಅಗ್ರಶ್ರೇಯಾಂಕದ ಚಾರ್ಮಿ ಗೋಪಿನಾಥ್ 2-6, 6-2, 10-3ರಲ್ಲಿ ಹೃತಿ ಆಹುಜಾ ಎದುರು ಜಯ ಗಳಿಸಿದರು.