<p><strong>ಬೆಂಗಳೂರು:</strong> ಅಪೂರ್ವ ಸಾಮರ್ಥ್ಯ ತೋರಿದ ಕರ್ನಾಟಕದ ಸುರಭಿ ಶ್ರೀನಿವಾಸ್, ಪಂಜಾಬ್ನ ಜಲಂದರ್ನಲ್ಲಿ ನಡೆದ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್ಷಿಪ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.</p>.<p>ಗುರುವಾರ ನಡೆದ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ರಾಜ್ಯದ ಆಟಗಾರ್ತಿ 6–3, 6–2 ನೇರ ಸೆಟ್ಗಳಿಂದ ಅಸ್ಸಾಂನ ತನಿಷ್ಕಾ ಪಾಲಾರ್ ಅವರನ್ನು ಸೋಲಿಸಿದರು.</p>.<p>ಬೆಂಗಳೂರಿನ ಲಿಟಲ್ ಫ್ಲವರ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸುರಭಿ, ಮೊದಲ ಸೆಟ್ನ ಶುರುವಿನಿಂದಲೂ ಪ್ರಾಬಲ್ಯ ಮೆರೆದರು. ಎರಡನೇ ಸೆಟ್ನಲ್ಲೂ ರಾಜ್ಯದ ಆಟಗಾರ್ತಿ ಶರವೇಗದ ಸರ್ವ್ ಮತ್ತು ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.</p>.<p>ಇದಕ್ಕೂ ಮೊದಲು ನಡೆದಿದ್ದ ನಾಲ್ಕರ ಘಟ್ಟದ ಹೋರಾಟದಲ್ಲಿ ಸುರಭಿ 6–1, 4–6, 6–3ರಲ್ಲಿ ಮಹಾರಾಷ್ಟ್ರದ ಸಾರಾ ಅವರನ್ನು ಸೋಲಿಸಿದ್ದರು.</p>.<p>ಮೊದಲ ಸೆಟ್ನಲ್ಲಿ ಸುರಭಿ ಸುಲಭವಾಗಿ ಗೆದ್ದರು. ಆದರೆ ಮರು ಸೆಟ್ನಲ್ಲಿ ತಿರುಗೇಟು ನೀಡಿದ ಸಾರಾ 1–1 ಸಮಬಲಕ್ಕೆ ಕಾರಣರಾದರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್ನಲ್ಲಿ ಛಲದಿಂದ ಹೋರಾಡಿದ ಕರ್ನಾಟಕದ ಆಟಗಾರ್ತಿ ಗೆಲುವಿನ ತೋರಣ ಕಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಪೂರ್ವ ಸಾಮರ್ಥ್ಯ ತೋರಿದ ಕರ್ನಾಟಕದ ಸುರಭಿ ಶ್ರೀನಿವಾಸ್, ಪಂಜಾಬ್ನ ಜಲಂದರ್ನಲ್ಲಿ ನಡೆದ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್ಷಿಪ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.</p>.<p>ಗುರುವಾರ ನಡೆದ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ರಾಜ್ಯದ ಆಟಗಾರ್ತಿ 6–3, 6–2 ನೇರ ಸೆಟ್ಗಳಿಂದ ಅಸ್ಸಾಂನ ತನಿಷ್ಕಾ ಪಾಲಾರ್ ಅವರನ್ನು ಸೋಲಿಸಿದರು.</p>.<p>ಬೆಂಗಳೂರಿನ ಲಿಟಲ್ ಫ್ಲವರ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸುರಭಿ, ಮೊದಲ ಸೆಟ್ನ ಶುರುವಿನಿಂದಲೂ ಪ್ರಾಬಲ್ಯ ಮೆರೆದರು. ಎರಡನೇ ಸೆಟ್ನಲ್ಲೂ ರಾಜ್ಯದ ಆಟಗಾರ್ತಿ ಶರವೇಗದ ಸರ್ವ್ ಮತ್ತು ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.</p>.<p>ಇದಕ್ಕೂ ಮೊದಲು ನಡೆದಿದ್ದ ನಾಲ್ಕರ ಘಟ್ಟದ ಹೋರಾಟದಲ್ಲಿ ಸುರಭಿ 6–1, 4–6, 6–3ರಲ್ಲಿ ಮಹಾರಾಷ್ಟ್ರದ ಸಾರಾ ಅವರನ್ನು ಸೋಲಿಸಿದ್ದರು.</p>.<p>ಮೊದಲ ಸೆಟ್ನಲ್ಲಿ ಸುರಭಿ ಸುಲಭವಾಗಿ ಗೆದ್ದರು. ಆದರೆ ಮರು ಸೆಟ್ನಲ್ಲಿ ತಿರುಗೇಟು ನೀಡಿದ ಸಾರಾ 1–1 ಸಮಬಲಕ್ಕೆ ಕಾರಣರಾದರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್ನಲ್ಲಿ ಛಲದಿಂದ ಹೋರಾಡಿದ ಕರ್ನಾಟಕದ ಆಟಗಾರ್ತಿ ಗೆಲುವಿನ ತೋರಣ ಕಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>