<p><strong>ಚೆನ್ನೈ (ಪಿಟಿಐ): </strong>ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಂಗಳದಲ್ಲಿ ಮಾಡಿದ್ದು `ಮಾಹಾಮಾನವ~ ಸಾಧನೆ~ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಬಣ್ಣಿಸಿದ್ದಾರೆ.<br /> `ಯಾವುದೇ ಕ್ರಿಕೆಟಿಗನೊಬ್ಬ ಇಂಥ ಸಾಧನೆ ಮಾಡಬಲ್ಲ ಎಂದು ಊಹಿಸಲು ಕೂಡ ಸಾಧ್ಯವಿಲ್ಲದಂಥ ಕಾಲವೊಂದಿತ್ತು. ಆದರೆ ಆ ಅಸಾಧ್ಯವನ್ನು ಸಾಧಿಸಿ ತೋರಿಸಿದ ಶ್ರೇಯ ಸಚಿನ್ ಅವರದ್ದು~ ಎಂದು ಶನಿವಾರ ಇಲ್ಲಿ ತಿಳಿಸಿದರು.<br /> <br /> `ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ಶತಕ ಗಳಿಸಿದ್ದು ಒಂದು ಅದ್ಭುತ. ಇಂಥದೊಂದು ಘಟನೆ ದೇಶದ ಬ್ಯಾಟ್ಸ್ಮನ್ನಿಂದ ಸಾಧ್ಯವಾಯಿತೆಂದು ಯೋಚಿಸಿದಾಗ ರೋಮಾಂಚನ ಆಗುವುದು ಸಹಜ~ ಎಂದ ಅವರು `ಸಚಿನ್ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಅಸಮಾನರ ಎದುರು ಆಡಿದ್ದರು. <br /> <br /> ಇಮ್ರಾನ್ ಖಾನ್ ಹಾಗೂ ವಾಸೀಮ್ ಅಕ್ರಮ್ ಎದುರು ಯುವ ಆಟಗಾರ ನಿಂತಿದ್ದನ್ನು ನೋಡುವುದೇ ವಿಚಿತ್ರ ಎನಿಸಿತ್ತು. ಆದರೆ ಅಂಥ ಅನೇಕ ಅಸಾಮಾನ್ಯ ಕ್ರಿಕೆಟಿಗರ ನಡುವೆ ನಿರೀಕ್ಷಿಸದಂಥ ಆಟವಾಡಿ ಬೆಳೆದ ಸಚಿನ್ ಮಹಾಮಾನವ ಎಂದೆನಿಸುತ್ತದೆ~ ಎಂದರು.<br /> <br /> `ಮೊದಲ ಪಂದ್ಯದಲ್ಲಿಯೇ ಗಾಯಗೊಳ್ಳುತ್ತಾನೆ. ಆದರೆ ಹಿಂಜರಿಯುವುದಿಲ್ಲ. ಡ್ರೆಸಿಂಗ್ ಕೋಣೆಗೆ ಹಿಂದಿರುಗುವುದೂ ಇಲ್ಲ. ಆಟ ಮುಂದುವರಿಸುತ್ತಾನೆ. ಅಲ್ಲಿಂದ ನಿರಂತರ ಆಟ. ಈಗಲೂ ಲಿಟಲ್ ಚಾಂಪಿಯನ್ ಆಟ ಮುಂದುವರಿದಿದೆ. ಇದೇ ಕಲ್ಪನೆಗೆ ನಿಲುಕದ ಸಾಮರ್ಥ್ಯ~ ಎಂದು ಮೆಚ್ಚುಗೆ ಸೂಚಿಸಿದರು.<br /> <br /> `ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ನಲ್ಲಿನ ಅಂಗಳ ಹಾಗೂ ವಾತಾವರಣ ಒಂದಕ್ಕೊಂದು ಹೊಂದಿಕೆ ಇಲ್ಲ. ಅಂಥ ವ್ಯತ್ಯಾಸವನ್ನು ಸಮಚಿತ್ತದಿಂದ ಸ್ವೀಕರಿಸಿ ಆಡಿದ್ದೇ ತೆಂಡೂಲ್ಕರ್ ಸಾಗಿದ ಕಠಿಣ ಮಾರ್ಗ~ ಎಂದ ಶ್ರೀಕಾಂತ್ `ಕೆಳಮಟ್ಟದಲ್ಲಿ ತಿರುವು ಪಡೆಯುವಂಥ ಭಾರತದಲ್ಲಿನ ಪಿಚ್ಗಳಲ್ಲಿ ಆಡಿ ಬೆಳೆದ ಒಬ್ಬನು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿನ ವೇಗದ ಪಿಚ್ಗಳಲ್ಲಿಯೂ ಶತಕದಾಟದ ಸಾಮರ್ಥ್ಯ ತೋರುತ್ತಾನೆ. ಅದೇ ಸಮಾನ ಗುಣವಿಲ್ಲದ ಪರಿಸ್ಥಿತಿಯಲ್ಲಿಯೂ ಸತ್ವಯುತವಾಗಿ ನಿಲ್ಲುವ ಶಕ್ತಿ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ): </strong>ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಂಗಳದಲ್ಲಿ ಮಾಡಿದ್ದು `ಮಾಹಾಮಾನವ~ ಸಾಧನೆ~ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಬಣ್ಣಿಸಿದ್ದಾರೆ.<br /> `ಯಾವುದೇ ಕ್ರಿಕೆಟಿಗನೊಬ್ಬ ಇಂಥ ಸಾಧನೆ ಮಾಡಬಲ್ಲ ಎಂದು ಊಹಿಸಲು ಕೂಡ ಸಾಧ್ಯವಿಲ್ಲದಂಥ ಕಾಲವೊಂದಿತ್ತು. ಆದರೆ ಆ ಅಸಾಧ್ಯವನ್ನು ಸಾಧಿಸಿ ತೋರಿಸಿದ ಶ್ರೇಯ ಸಚಿನ್ ಅವರದ್ದು~ ಎಂದು ಶನಿವಾರ ಇಲ್ಲಿ ತಿಳಿಸಿದರು.<br /> <br /> `ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ಶತಕ ಗಳಿಸಿದ್ದು ಒಂದು ಅದ್ಭುತ. ಇಂಥದೊಂದು ಘಟನೆ ದೇಶದ ಬ್ಯಾಟ್ಸ್ಮನ್ನಿಂದ ಸಾಧ್ಯವಾಯಿತೆಂದು ಯೋಚಿಸಿದಾಗ ರೋಮಾಂಚನ ಆಗುವುದು ಸಹಜ~ ಎಂದ ಅವರು `ಸಚಿನ್ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಅಸಮಾನರ ಎದುರು ಆಡಿದ್ದರು. <br /> <br /> ಇಮ್ರಾನ್ ಖಾನ್ ಹಾಗೂ ವಾಸೀಮ್ ಅಕ್ರಮ್ ಎದುರು ಯುವ ಆಟಗಾರ ನಿಂತಿದ್ದನ್ನು ನೋಡುವುದೇ ವಿಚಿತ್ರ ಎನಿಸಿತ್ತು. ಆದರೆ ಅಂಥ ಅನೇಕ ಅಸಾಮಾನ್ಯ ಕ್ರಿಕೆಟಿಗರ ನಡುವೆ ನಿರೀಕ್ಷಿಸದಂಥ ಆಟವಾಡಿ ಬೆಳೆದ ಸಚಿನ್ ಮಹಾಮಾನವ ಎಂದೆನಿಸುತ್ತದೆ~ ಎಂದರು.<br /> <br /> `ಮೊದಲ ಪಂದ್ಯದಲ್ಲಿಯೇ ಗಾಯಗೊಳ್ಳುತ್ತಾನೆ. ಆದರೆ ಹಿಂಜರಿಯುವುದಿಲ್ಲ. ಡ್ರೆಸಿಂಗ್ ಕೋಣೆಗೆ ಹಿಂದಿರುಗುವುದೂ ಇಲ್ಲ. ಆಟ ಮುಂದುವರಿಸುತ್ತಾನೆ. ಅಲ್ಲಿಂದ ನಿರಂತರ ಆಟ. ಈಗಲೂ ಲಿಟಲ್ ಚಾಂಪಿಯನ್ ಆಟ ಮುಂದುವರಿದಿದೆ. ಇದೇ ಕಲ್ಪನೆಗೆ ನಿಲುಕದ ಸಾಮರ್ಥ್ಯ~ ಎಂದು ಮೆಚ್ಚುಗೆ ಸೂಚಿಸಿದರು.<br /> <br /> `ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ನಲ್ಲಿನ ಅಂಗಳ ಹಾಗೂ ವಾತಾವರಣ ಒಂದಕ್ಕೊಂದು ಹೊಂದಿಕೆ ಇಲ್ಲ. ಅಂಥ ವ್ಯತ್ಯಾಸವನ್ನು ಸಮಚಿತ್ತದಿಂದ ಸ್ವೀಕರಿಸಿ ಆಡಿದ್ದೇ ತೆಂಡೂಲ್ಕರ್ ಸಾಗಿದ ಕಠಿಣ ಮಾರ್ಗ~ ಎಂದ ಶ್ರೀಕಾಂತ್ `ಕೆಳಮಟ್ಟದಲ್ಲಿ ತಿರುವು ಪಡೆಯುವಂಥ ಭಾರತದಲ್ಲಿನ ಪಿಚ್ಗಳಲ್ಲಿ ಆಡಿ ಬೆಳೆದ ಒಬ್ಬನು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿನ ವೇಗದ ಪಿಚ್ಗಳಲ್ಲಿಯೂ ಶತಕದಾಟದ ಸಾಮರ್ಥ್ಯ ತೋರುತ್ತಾನೆ. ಅದೇ ಸಮಾನ ಗುಣವಿಲ್ಲದ ಪರಿಸ್ಥಿತಿಯಲ್ಲಿಯೂ ಸತ್ವಯುತವಾಗಿ ನಿಲ್ಲುವ ಶಕ್ತಿ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>