<p><strong>ಧಾರವಾಡ</strong>: ಸುಜಿತ್ ಸಚ್ಚಿದಾನಂದ ಮತ್ತು ಜಿ.ಕೆ. ಶ್ವೇತಾ ಭಾನುವಾರ ಇಲ್ಲಿ ಮುಕ್ತಾಯವಾದ ಧ್ರುವ ಗಾಂವ್ಕರ್ ಸ್ಮರಣಾರ್ಥ ‘ಧಾರವಾಡ ಓಪನ್-2011’ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. <br /> <br /> ಸುವಿಧಾ ಇವೆಂಟ್ ಮ್ಯಾನೇಜರ್ಸ್ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಕೋರ್ಟ್ನಲ್ಲಿ ನಡೆದ ಪುರುಷರ ಫೈನಲ್ನಲ್ಲಿ ಸುಜೀತ್ ಸಚ್ಚಿದಾನಂದ 6-2, 6-2ರಿಂದ ಮೊಹ್ಮದ್ ಶಹಭಾಜ್ ವಿರುದ್ಧ ಜಯಿಸಿದರು. <br /> <br /> ಸೆಮಿಫೈನಲ್ನಲ್ಲಿ ಸುಜಿತ್ 9-1 ರಿಂದ ರಾಹುಲ್ ಭಿಲ್ಲೆ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನೊಂದು ರೋಚಕ ಸೆಮಿಫೈನಲ್ನಲ್ಲಿ ಮೊಹ್ಮದ್ ಶಾಹಭಾಜ್ 9-5ರಿಂದ ಪೀಟರ್ ವಿಜಯಕುಮಾರ ಅವರನ್ನು ಪರಾಭವಗೊಳಿಸಿದರು. <br /> ಎಂಟರ ಘಟ್ಟದ ಪಂದ್ಯಗಳಲ್ಲಿ ರಾಹುಲ್ ಭಿಲ್ಲೆ 8-4ರಿಂದ ನಿಸಾರ್ ಜೇವೂರ್ ವಿರುದ್ಧ, ಸುಜೀತ್ 8-3ರಿಂದ ವಿಕಾಸ ಹನಸೋಗಿ ವಿರುದ್ಧ, ಮೊಹ್ಮದ್ ಶಾಹಬಾಜ್ 8-5ರಿಂದ ಹರ್ಷ ಮಂಜುನಾಥ ವಿರುದ್ಧ ಗೆದ್ದರು. <br /> <br /> ಶ್ವೇತಾಗೆ ಪ್ರಶಸ್ತಿ: 19 ವರ್ಷದೊಳಗಿನವರ ವಿಭಾಗದಲ್ಲಿ ಅಂತರರಾಷ್ಟ್ರೀಯ ಆಟಗಾರ್ತಿ ಜಿ.ಕೆ. ಶ್ವೇತಾ 6-0, 6-0ಯಿಂದ ಧಾರವಾಡದ ಪ್ರೇರಣಾ ಕಳವಾರ ಅವರನ್ನು ಹಣಿದರು. ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಕ್ಹ್ಯಾಂಡ್, ಫೋರ್ಹ್ಯಾಂಡ್ ಹೊಡೆತಗಳನ್ನು ಪ್ರದರ್ಶಿಶಿದ ಶ್ವೇತಾ, ಪ್ರೇರಣಾ ಅವರಿಗೆ ಪಾಯಿಂಟ್ ಗಳಿಸಲು ಅವಕಾಶವನ್ನೇ ಕೊಡಲಿಲ್ಲ. <br /> <br /> ಸುಜಿತ್ಗೆ ಡಬಲ್ಸ್ ಪ್ರಶಸ್ತಿ: ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸುಜೀತ್ ಸಚ್ಚಿದಾನಂದ ಅವರು ಹರ್ಷ ಮಂಜುನಾಥ ಅವರೊಂದಿಗೆ ಸೇರಿ ಡಬಲ್ಸ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 6-0, 6-0ಯಿಂದ ಪೀಟರ್ ವಿಜಯಕುಮಾರ ಮತ್ತು ಎಲ್. ಹರ್ಷ ಅವರನ್ನು ಮಣಿಸಿದರು. <br /> <br /> ಸೆಮಿಫೈನಲ್ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 9-0ಯಿಂದ ರಾಹುಲ್ ಭಿೆ ಮತ್ತು ವಿಕಾಶ ಅನಸೋಗಿ ವಿರುದ್ಧವೂ, ಪೀಟರ್ ಮತ್ತು ಹರ್ಷ ಜೋಡಿಯು 9-3ರಿಂದ ಎಡ್ವಿನ್ ಮೆಂಡೋನ್ಸಾ ಮತ್ತು ಅನಿಲ್ ಸಿಂಧಗಿ ವಿರುದ್ಧ ಜಯ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಸುಜಿತ್ ಸಚ್ಚಿದಾನಂದ ಮತ್ತು ಜಿ.ಕೆ. ಶ್ವೇತಾ ಭಾನುವಾರ ಇಲ್ಲಿ ಮುಕ್ತಾಯವಾದ ಧ್ರುವ ಗಾಂವ್ಕರ್ ಸ್ಮರಣಾರ್ಥ ‘ಧಾರವಾಡ ಓಪನ್-2011’ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. <br /> <br /> ಸುವಿಧಾ ಇವೆಂಟ್ ಮ್ಯಾನೇಜರ್ಸ್ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಕೋರ್ಟ್ನಲ್ಲಿ ನಡೆದ ಪುರುಷರ ಫೈನಲ್ನಲ್ಲಿ ಸುಜೀತ್ ಸಚ್ಚಿದಾನಂದ 6-2, 6-2ರಿಂದ ಮೊಹ್ಮದ್ ಶಹಭಾಜ್ ವಿರುದ್ಧ ಜಯಿಸಿದರು. <br /> <br /> ಸೆಮಿಫೈನಲ್ನಲ್ಲಿ ಸುಜಿತ್ 9-1 ರಿಂದ ರಾಹುಲ್ ಭಿಲ್ಲೆ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನೊಂದು ರೋಚಕ ಸೆಮಿಫೈನಲ್ನಲ್ಲಿ ಮೊಹ್ಮದ್ ಶಾಹಭಾಜ್ 9-5ರಿಂದ ಪೀಟರ್ ವಿಜಯಕುಮಾರ ಅವರನ್ನು ಪರಾಭವಗೊಳಿಸಿದರು. <br /> ಎಂಟರ ಘಟ್ಟದ ಪಂದ್ಯಗಳಲ್ಲಿ ರಾಹುಲ್ ಭಿಲ್ಲೆ 8-4ರಿಂದ ನಿಸಾರ್ ಜೇವೂರ್ ವಿರುದ್ಧ, ಸುಜೀತ್ 8-3ರಿಂದ ವಿಕಾಸ ಹನಸೋಗಿ ವಿರುದ್ಧ, ಮೊಹ್ಮದ್ ಶಾಹಬಾಜ್ 8-5ರಿಂದ ಹರ್ಷ ಮಂಜುನಾಥ ವಿರುದ್ಧ ಗೆದ್ದರು. <br /> <br /> ಶ್ವೇತಾಗೆ ಪ್ರಶಸ್ತಿ: 19 ವರ್ಷದೊಳಗಿನವರ ವಿಭಾಗದಲ್ಲಿ ಅಂತರರಾಷ್ಟ್ರೀಯ ಆಟಗಾರ್ತಿ ಜಿ.ಕೆ. ಶ್ವೇತಾ 6-0, 6-0ಯಿಂದ ಧಾರವಾಡದ ಪ್ರೇರಣಾ ಕಳವಾರ ಅವರನ್ನು ಹಣಿದರು. ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಕ್ಹ್ಯಾಂಡ್, ಫೋರ್ಹ್ಯಾಂಡ್ ಹೊಡೆತಗಳನ್ನು ಪ್ರದರ್ಶಿಶಿದ ಶ್ವೇತಾ, ಪ್ರೇರಣಾ ಅವರಿಗೆ ಪಾಯಿಂಟ್ ಗಳಿಸಲು ಅವಕಾಶವನ್ನೇ ಕೊಡಲಿಲ್ಲ. <br /> <br /> ಸುಜಿತ್ಗೆ ಡಬಲ್ಸ್ ಪ್ರಶಸ್ತಿ: ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸುಜೀತ್ ಸಚ್ಚಿದಾನಂದ ಅವರು ಹರ್ಷ ಮಂಜುನಾಥ ಅವರೊಂದಿಗೆ ಸೇರಿ ಡಬಲ್ಸ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 6-0, 6-0ಯಿಂದ ಪೀಟರ್ ವಿಜಯಕುಮಾರ ಮತ್ತು ಎಲ್. ಹರ್ಷ ಅವರನ್ನು ಮಣಿಸಿದರು. <br /> <br /> ಸೆಮಿಫೈನಲ್ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 9-0ಯಿಂದ ರಾಹುಲ್ ಭಿೆ ಮತ್ತು ವಿಕಾಶ ಅನಸೋಗಿ ವಿರುದ್ಧವೂ, ಪೀಟರ್ ಮತ್ತು ಹರ್ಷ ಜೋಡಿಯು 9-3ರಿಂದ ಎಡ್ವಿನ್ ಮೆಂಡೋನ್ಸಾ ಮತ್ತು ಅನಿಲ್ ಸಿಂಧಗಿ ವಿರುದ್ಧ ಜಯ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>