<p>ಮೀರ್ಪುರ (ಪಿಟಿಐ): `ನಾನು ದೇವರಲ್ಲ. ಕೇವಲ ಸಚಿನ್ ತೆಂಡೂಲ್ಕರ್ ...~<br /> ಶತಕಗಳ ಶತಕ ಗಳಿಸಿ ಸಾಧನೆ ಮಾಡಿದ ಮುಂಬೈಕರ್ ಬಗ್ಗೆ ಅಭಿಮಾನಿಗಳು ಪ್ರೀತಿಯಿಂದ `ದೇವರು~ ಅಂತಲೇ ಕರೆಯುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು `ನಾನು ದೇವರಲ್ಲ~ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ.<br /> <br /> `ನಾನು ಖಂಡಿತವಾಗಿಯೂ ಪ್ರಾಮಾಣಿಕ. ಮಾನವೀಯ ಗುಣಗಳನ್ನು ಹೊಂದಿದ್ದೇನೆ. ಅಷ್ಟೇ ಅಲ್ಲ ಭಾವನಾ ಜೀವಿಯೂ ಹೌದು. ಇದಷ್ಟೆ ನನಗೆ ಗೊತ್ತು~ ಎಂದು ತಿಳಿಸಿದ್ದಾರೆ.<br /> <br /> `ಶತಕ ಗಳಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ತಂಡದ ಒಳಿತಿಗೆ ಮಾತ್ರ ಆಡುತ್ತಿದ್ದೆ. ಪ್ರತಿಬಾರಿಯೂ ನಾನು ಸ್ಕೋರು ಬೋರ್ಡ್ ನೋಡಿದಾಗ, ರನ್ ಸರಾಸರಿಯನ್ನು ಗಮನಿಸುತ್ತಿದ್ದೆ. ತಂಡಕ್ಕೆ ಇನ್ನೂ ಎಷ್ಟು ರನ್ ಅಗತ್ಯವಿದೆ ಎಂದು ಯೋಚಿಸುತ್ತಿದ್ದೆ~ ಎನ್ನುತ್ತಾರೆ ಲಿಟಲ್ ಮಾಸ್ಟರ್.<br /> <br /> `ನನ್ನ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಕೆಲ ವರದಿಗಳಲ್ಲಿ ಟೀಕೆ ಸಹ ಮಾಡಲಾಗಿದೆ. ಇದ್ಯಾವುದರ ಬಗ್ಗೆ ತಿರುಗಿಯೂ ನೋಡಲಿಲ್ಲ. ನನ್ನ ಕೆಲಸವನ್ನು ನಾನು ಮಾಡಿದೆ. ಏಳು-ಬೀಳುಗಳ ಜೀವನದಲ್ಲಿ ಸಹಜ ಎನ್ನುವುದನ್ನು ಮೊದಲೇ ಅರಿತಿದ್ದೇನೆ. ಇವುಗಳನ್ನು ಅನುಭವಿಸದವರು ಸಾಧನೆ ಮಾಡಲು ಅಸಾಧ್ಯ~ ಎನ್ನುವುದು ಸಚಿನ್ ಅಭಿಪ್ರಾಯ.<br /> <br /> ವಿಶ್ವಕಪ್ ನಂತರ ಸಚಿನ್ ನಿವೃತ್ತಿ ಹೊಂದಬೇಕಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, `ಭಾರತ ವಿಶ್ವಕಪ್ ಜಯಿಸಿದ ನಂತರ ನಿವೃತ್ತಿ ಹೊಂದಿದ್ದರೆ, ಅದು ಸ್ವಾರ್ಥವೆನಿಸುತ್ತಿತ್ತು~ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೀರ್ಪುರ (ಪಿಟಿಐ): `ನಾನು ದೇವರಲ್ಲ. ಕೇವಲ ಸಚಿನ್ ತೆಂಡೂಲ್ಕರ್ ...~<br /> ಶತಕಗಳ ಶತಕ ಗಳಿಸಿ ಸಾಧನೆ ಮಾಡಿದ ಮುಂಬೈಕರ್ ಬಗ್ಗೆ ಅಭಿಮಾನಿಗಳು ಪ್ರೀತಿಯಿಂದ `ದೇವರು~ ಅಂತಲೇ ಕರೆಯುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು `ನಾನು ದೇವರಲ್ಲ~ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ.<br /> <br /> `ನಾನು ಖಂಡಿತವಾಗಿಯೂ ಪ್ರಾಮಾಣಿಕ. ಮಾನವೀಯ ಗುಣಗಳನ್ನು ಹೊಂದಿದ್ದೇನೆ. ಅಷ್ಟೇ ಅಲ್ಲ ಭಾವನಾ ಜೀವಿಯೂ ಹೌದು. ಇದಷ್ಟೆ ನನಗೆ ಗೊತ್ತು~ ಎಂದು ತಿಳಿಸಿದ್ದಾರೆ.<br /> <br /> `ಶತಕ ಗಳಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ತಂಡದ ಒಳಿತಿಗೆ ಮಾತ್ರ ಆಡುತ್ತಿದ್ದೆ. ಪ್ರತಿಬಾರಿಯೂ ನಾನು ಸ್ಕೋರು ಬೋರ್ಡ್ ನೋಡಿದಾಗ, ರನ್ ಸರಾಸರಿಯನ್ನು ಗಮನಿಸುತ್ತಿದ್ದೆ. ತಂಡಕ್ಕೆ ಇನ್ನೂ ಎಷ್ಟು ರನ್ ಅಗತ್ಯವಿದೆ ಎಂದು ಯೋಚಿಸುತ್ತಿದ್ದೆ~ ಎನ್ನುತ್ತಾರೆ ಲಿಟಲ್ ಮಾಸ್ಟರ್.<br /> <br /> `ನನ್ನ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಕೆಲ ವರದಿಗಳಲ್ಲಿ ಟೀಕೆ ಸಹ ಮಾಡಲಾಗಿದೆ. ಇದ್ಯಾವುದರ ಬಗ್ಗೆ ತಿರುಗಿಯೂ ನೋಡಲಿಲ್ಲ. ನನ್ನ ಕೆಲಸವನ್ನು ನಾನು ಮಾಡಿದೆ. ಏಳು-ಬೀಳುಗಳ ಜೀವನದಲ್ಲಿ ಸಹಜ ಎನ್ನುವುದನ್ನು ಮೊದಲೇ ಅರಿತಿದ್ದೇನೆ. ಇವುಗಳನ್ನು ಅನುಭವಿಸದವರು ಸಾಧನೆ ಮಾಡಲು ಅಸಾಧ್ಯ~ ಎನ್ನುವುದು ಸಚಿನ್ ಅಭಿಪ್ರಾಯ.<br /> <br /> ವಿಶ್ವಕಪ್ ನಂತರ ಸಚಿನ್ ನಿವೃತ್ತಿ ಹೊಂದಬೇಕಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, `ಭಾರತ ವಿಶ್ವಕಪ್ ಜಯಿಸಿದ ನಂತರ ನಿವೃತ್ತಿ ಹೊಂದಿದ್ದರೆ, ಅದು ಸ್ವಾರ್ಥವೆನಿಸುತ್ತಿತ್ತು~ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>