<p><strong>ಬೆಂಗಳೂರು: </strong>ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಎಸ್. ಚಿಕ್ಕರಂಗಪ್ಪ, ಶ್ರೀಧರ್ ಹಾಗೂ ಅಮಿತ್ ಸೇರಿದಂತೆ ಇತರ ಗಾಲ್ಫರ್ಗಳು ಅಕ್ಟೋಬರ್ 29ರಿಂದ ನವೆಂಬರ್ 5ರ ವರೆಗೆ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ನಡೆಯಲಿರುವ ವಿಶ್ವ ಗಾಲ್ಫರ್ಗಳ ಚಾಂಪಿಯನ್ಷಿಪ್ಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.<br /> ಇಲ್ಲಿನ ಕರ್ನಾಟಕ ಗಾಲ್ಫ್ ಕೋರ್ಸ್ನಲ್ಲಿ ನಡೆದ `ಟೊಯೋಟಾ ಗಾಲ್ಫ್ ಉತ್ಸವ~ದ ಮೂರನೇ ಆವೃತ್ತಿಯಲ್ಲಿ ಈ ಗಾಲ್ಫರ್ಗಳು ಉತ್ತಮ ಪ್ರದರ್ಶನ ನೀಡಿದರು.<br /> <br /> ಉತ್ಸವದ ಕೊನೆಯ ದಿನವಾದ ಭಾನುವಾರ ಶ್ರೀಧರ್ ಪ್ರಭಾವಿ ಪ್ರದರ್ಶನ ನೀಡಿದರು. ವೈಯಕ್ತಿಕವಾಗಿ ಒಟ್ಟು ಹೆಚ್ಚು ಪಾಯಿಂಟ್ ಗಳಿಸಿದ ಆಟಗಾರ ಎನ್ನುವ ಕೀರ್ತಿ ಪಡೆದರು. ಅದೇ ರೀತಿ 0-5ಹ್ಯಾಂಡಿ ಕ್ಯಾಪ್ ವಿಭಾಗದಲ್ಲಿ ಅಮಿತ್ ಲುಕ್ರಾ (35), ಕರ್ನಾಟಕದ ಎಸ್. ಚಿಕ್ಕರಂಗಪ್ಪ (33) ಹಾಗೂ ಶ್ರೀಧರ್ ರೆಡ್ಡಿ (32) ಗಳಿಸಿದರು.<br /> <br /> 6-10 ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಎಚ್.ಆರ್. ಶ್ರೀನಿವಾಸನ್ (52), ಜಿ.ನಮಿತ್ (35), ಶ್ರೀಪಾದ್ ರೇಣು (30) ಹಾಗೂ 6-20 ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಎ. ಆನಂದ್ ಕುಮಾರ್ (37), ವಿ. ಉಮೇಶ್ (33), ಟಿ. ಸುಕುಮಾರ್ (33) ಗಳಿಸಿ ವಿಶ್ವ ಗಾಲ್ಫರ್ಗಳ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದಕ್ಕಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಎಸ್. ಚಿಕ್ಕರಂಗಪ್ಪ, ಶ್ರೀಧರ್ ಹಾಗೂ ಅಮಿತ್ ಸೇರಿದಂತೆ ಇತರ ಗಾಲ್ಫರ್ಗಳು ಅಕ್ಟೋಬರ್ 29ರಿಂದ ನವೆಂಬರ್ 5ರ ವರೆಗೆ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ನಡೆಯಲಿರುವ ವಿಶ್ವ ಗಾಲ್ಫರ್ಗಳ ಚಾಂಪಿಯನ್ಷಿಪ್ಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.<br /> ಇಲ್ಲಿನ ಕರ್ನಾಟಕ ಗಾಲ್ಫ್ ಕೋರ್ಸ್ನಲ್ಲಿ ನಡೆದ `ಟೊಯೋಟಾ ಗಾಲ್ಫ್ ಉತ್ಸವ~ದ ಮೂರನೇ ಆವೃತ್ತಿಯಲ್ಲಿ ಈ ಗಾಲ್ಫರ್ಗಳು ಉತ್ತಮ ಪ್ರದರ್ಶನ ನೀಡಿದರು.<br /> <br /> ಉತ್ಸವದ ಕೊನೆಯ ದಿನವಾದ ಭಾನುವಾರ ಶ್ರೀಧರ್ ಪ್ರಭಾವಿ ಪ್ರದರ್ಶನ ನೀಡಿದರು. ವೈಯಕ್ತಿಕವಾಗಿ ಒಟ್ಟು ಹೆಚ್ಚು ಪಾಯಿಂಟ್ ಗಳಿಸಿದ ಆಟಗಾರ ಎನ್ನುವ ಕೀರ್ತಿ ಪಡೆದರು. ಅದೇ ರೀತಿ 0-5ಹ್ಯಾಂಡಿ ಕ್ಯಾಪ್ ವಿಭಾಗದಲ್ಲಿ ಅಮಿತ್ ಲುಕ್ರಾ (35), ಕರ್ನಾಟಕದ ಎಸ್. ಚಿಕ್ಕರಂಗಪ್ಪ (33) ಹಾಗೂ ಶ್ರೀಧರ್ ರೆಡ್ಡಿ (32) ಗಳಿಸಿದರು.<br /> <br /> 6-10 ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಎಚ್.ಆರ್. ಶ್ರೀನಿವಾಸನ್ (52), ಜಿ.ನಮಿತ್ (35), ಶ್ರೀಪಾದ್ ರೇಣು (30) ಹಾಗೂ 6-20 ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಎ. ಆನಂದ್ ಕುಮಾರ್ (37), ವಿ. ಉಮೇಶ್ (33), ಟಿ. ಸುಕುಮಾರ್ (33) ಗಳಿಸಿ ವಿಶ್ವ ಗಾಲ್ಫರ್ಗಳ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದಕ್ಕಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>