ನವದೆಹಲಿ: ಸಚಿನ್ ತೆಂಡೂಲ್ಕರ್ ಅವರನ್ನು ಭಾರತ ಕ್ರಿಕೆಟ್ ತಂಡದ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವಂತೆ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಮಂಗಳವಾರ ನಡೆದ ಬಿಸಿಸಿಐನ ವಿಶೇಷ ಸಮಿತಿಯ ಸಭೆಯಲ್ಲಿ ರವಿಶಾಸ್ತ್ರಿ ತಮ್ಮ ಮನದಿಚ್ಛೆಯನ್ನು ಹೇಳಿಕೊಂಡಿದ್ದಾರೆ.
ಆದರೆ, ರವಿಶಾಸ್ತ್ರಿ ಅವರ ಇಚ್ಛೆಯು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಬಿಸಿಸಿಐನ ವಿಶೇಷ ಸಮಿತಿ ತಿಳಿಸಿದೆ.
‘ಸಚಿನ್ ಅವರನ್ನು ತಂಡದ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಬಹುದು ಎಂಬುದನ್ನು ರವಿಶಾಸ್ತ್ರಿ ಅವರ ಗಮಕ್ಕೆ ತಂದಿದ್ದೇವೆ’ ಎಂದು ವಿಶೇಷ ಸಮಿತಿಯ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ತಿಳಿಸಿದ್ದಾರೆ.