‘ಕ್ಲಬ್ ಮಾಲೀಕರಾದ ಸುರೇಶ್, ಕೃಷ್ಣ ರಾವ್, ಸುನೀಲ್ ಮತ್ತು ದಾಳಿ ವೇಳೆ ತಲೆಮರೆಸಿಕೊಂಡಿರುವ ಹನೀಫ್, ಪಂಟರ್ಗಳನ್ನು ಕರೆಸಿಕೊಂಡು ನಗರದ ಬಲ್ಲಾಳ್ ರೆಸಿಡೆನ್ಸಿ ಮತ್ತು ಇತರ ಹೋಟೆಲ್ಗಳಲ್ಲಿ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದರು. ಬಳಿಕ ಕ್ಲಬ್ನಲ್ಲಿ ಜೂಜಾಟಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ಅಲ್ಲದೆ, ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಟ್ಟು, ಜೂಜಾಟದಲ್ಲಿ ತೊಡಗಿದ್ದವರಿಗೆ ಪೂರೈಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.