ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕನ ವಿಚಾರಣೆಗೆ ತಡೆ

Last Updated 9 ಫೆಬ್ರುವರಿ 2019, 19:47 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ನಿವಾಸಿ, ನಿರ್ಮಾಪಕ ಚಂದ್ರಶೇಖರ ವಿರುದ್ಧ ತುಮಕೂರು ಪೊಲೀಸರು ಪ್ರಕರಣದ ವಿಚಾರಣೆಗೆ ಶನಿವಾರ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ತುಮಕೂರಿನ ಟಿ.ಸಿ. ಬಸವರಾಜು ಅವರ ಮಗನನ್ನು ನಾಯಕನನ್ನಾಗಿ ಮಾಡಿ ಸಿನಿಮಾ ನಿರ್ಮಿಸುವುದಾಗಿ ಹೇಳಿ ₹75 ಲಕ್ಷ ತೆಗೆದುಕೊಂಡು ವಂಚಿಸಿದ ಆರೋಪ ಚಂದ್ರಶೇಖರ ಅವರ ಮೇಲಿದೆ. ಈ ಸಂಬಂಧ ಬಸವರಾಜು ಹೈಕೋರ್ಟ್‌ ಮೊರೆ ಹೋಗಿದ್ದರು. ಚಂದ್ರಶೇಖರ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಹೈಕೋರ್ಟ್‌ ಆದೇಶಿಸಿತ್ತು.

‘ಇದು ಸಂಪೂರ್ಣ ಸಿವಿಲ್‌ ಪ್ರಕರಣ. ಅಲ್ಲದೆ, ಬಸವರಾಜು ಅವರ ಆರೋಪ ಸಂಪೂರ್ಣ ಸುಳ್ಳಾಗಿರುವುದರಿಂದ ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಚಂದ್ರಶೇಖರ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT