ಬೆಂಗಳೂರು: ’ನನ್ನನ್ನ ಯಾಕೆ ಹುಟ್ಟಿಸಿದೆ?!’– ಯೌವನಕ್ಕೆ ಕಾಲಿಟ್ಟಿರುವ ಮಗ ಮತ್ತು ತಂದೆ ನಡುವೆ ಮನೆಯಲ್ಲಿ ಮಾತಿಗೆ ಮಾತು ಬೆಳೆದರೆ, ಒಮ್ಮೆಯಾದರೂ ಮಗನಿಂದ ಇಂಥದ್ದೊಂದು ಸಾಲು ಹೊರಗೆ ಬಂದಿರುತ್ತೆ.ಕೋಪದಲ್ಲಿ ಬರುವ ಅಂಥ ಮಾತಿಗೂ, ದೀರ್ಘ ಸಮಾಲೋಚನೆ ಬೆಳೆಸಿಕೊಂಡಿರುವ ಇಂಥದ್ದೇ ಯೋಚನೆಗೂ ವ್ಯತ್ಯಾಸವಿದೆ. ಮಕ್ಕಳಿಗೆ ಜನ್ಮ ನೀಡುವುದನ್ನು ಪ್ರಶ್ನಿಸಿಕೊಳ್ಳುತ್ತಿರುವ ಕೆಲವು ಒಂದೆಡೆ ಸೇರಿ ಇದನ್ನು ಮತ್ತಷ್ಟು ವಿಸ್ತರಿಸಲು ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ.