ಆಗಿದ್ದೇನು?: ಮಲಾಕಾರ್ ಹಾಗೂ ಆರೋಪಿಗಳು ಬಂಡೇನಗರದಲ್ಲಿ ಒಂದೇ ವಠಾರದಲ್ಲಿ ನೆಲೆಸಿದ್ದರು. ಮೇ 10ರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದರು. ನಿದ್ರೆಗೆ ಭಂಗ ಆಗಿದ್ದರಿಂದ ಎದ್ದು ಬಂದ ಮಲಾಕಾರ್ ಬುದ್ಧಿ ಹೇಳಿದ್ದರು. ಅದಕ್ಕೆ ಕುಪಿತಗೊಂಡ ಆರೋಪಿಗಳು, ‘ನೀನು ಬಾಂಗ್ಲಾದೇಶದವ’ ಎಂದಿದ್ದರು. ಅದಕ್ಕೆ, ‘ನಾನೂ ಅಸ್ಸಾಂನವನೇ’ ಎಂದು ಮಲಾಕಾರ್ ಕೂಡ ವಾಗ್ವಾದಕ್ಕೆ ಇಳಿದಿದ್ದರು.