ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಅಕ್ಟೋಬರ್ ತಿಂಗಳಲ್ಲಿ ಒಂದು ದಿನವೂ ಸಹಿ ಹಾಕದಿರುವುದನ್ನು ಕಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರ ಜೊತೆಗೆ ಇನ್ನೂ ಕೆಲ ಸಿಬ್ಬಂದಿ ಸಹಿ ಹಾಕಿರಲಿಲ್ಲ. ಸಹಿ ಹಾಕದವರಿಗೆ ಗೈರು ಹಾಜರಿ ಎಂದು ನಮೂದಿಸಿ ವೇತನ ಕಡಿತಗೊಳಿಸುವಂತೆ ಕಚೇರಿ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ಅಲ್ಲದೆ, ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಲೋಕೇಶ್ ಅವರಿಗೆ ಕರೆ ಮಾಡಿ, ‘ಸಹಿ ಹಾಕದ ಎಲ್ಲಾ ಸಿಬ್ಬಂದಿಯ ಒಂದು ವಾರದ ವೇತನ ಕಡಿತಗೊಳಿಸಿ’ ಎಂದು ಸೂಚಿಸಿದರು.