‘ನನಗೆ ಪಿಯು ಪರೀಕ್ಷೆಯ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ನನಗೆ ಕೇವಲ ಶೇ 84ರಷ್ಟು ಅಂಕ ಬಂದಿತ್ತು. ನಾನು ಪರೀಕ್ಷೆ ಬರೆದುದರಿಂದ ನನಗೆ ಹೆಚ್ಚಿನ ಅಂಕ ಸಿಕ್ಕೇ ಸಿಗಬೇಕಿತ್ತು. ಆದರೆ, ಮರು ಮೌಲ್ಯಮಾಪನಕ್ಕೆ ಸ್ಕ್ಯಾನ್ಡ್ ಕಾಪಿಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನನಗಿರಲಿಲ್ಲ. ವಿಷಯ ಗೊತ್ತಾದಾಗ ಸಮಯ ಮೀರಿತ್ತು. ಆದರೆ, ನನಗೆ ಬೇಸರವಿಲ್ಲ. ನನಗೆ ಪಿಲಾನಿಯ ‘ಬಿಟ್ಸ್’ ಸಹಿತ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಸಿಗುವ ಅವಕಾಶ ಇದ್ದೇ ಇದೆ’ ಎಂದು ಗಗನ್ ಹೆಗಡೆ ಹೇಳಿದರು.