ಸುಮಾರು 5 ಗಂಟೆಗಳ ಕಾಲ ಮರ ಏರಿದ ಉಪಾಧ್ಯಕ್ಷ ಹಾಗೂ ಮರದ ಕೆಳಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮಚಂದ್ರ ಭಟ್, ಪಿಡಿಒ ವಿಶ್ವನಾಥ ನಡುವೆ ಮಾತುಕತೆ, ಚರ್ಚೆ, ಸಂಧಾನ ನಡೆಯಿತು. ಪಿಡಿಒ ತಮ್ಮ ತಪ್ಪನ್ನು ಒಪ್ಪಿಕೊಂಡು, ಪಾರ್ಶ್ವವಾಯು ಪೀಡಿತ ಮರಿಯಾ ಅವರಿಗೆ ₹ 12 ಸಾವಿರ ನೀಡಿದ ಮೇಲೆಯೇ ಮಧ್ಯಾಹ್ನ 3.30ರ ಹೊತ್ತಿಗೆ ಕರುಣಾಕರ ಶೆಟ್ಟಿ ಕೆಳಗಿಳಿದರು.