<p><strong>ಹೊಸಕೋಟೆ: </strong>ಪಟ್ಟಣದ ಹೊರವಲಯದಲ್ಲಿರುವ ಅಮಾನಿ ದೊಡ್ಡಕೆರೆ ಒಡಲಿಗೆ ಕಿಡಿಗೇಡಿಗಳು ತ್ಯಾಜ್ಯ ಸುರಿಯುವ, ಬೆಂಕಿ ಹಾಕುವ ಕೃತ್ಯ ಎಸಗುತ್ತಿದ್ದಾರೆ.</p>.<p>ಈ ಕೆರೆ ಪಟ್ಟಣದ ಜಲಮೂಲವೂ ಹೌದು. ಸಾವಿರಾರು ವಲಸೆಹಕ್ಕಿಗಳಿಗೆ ಆಶ್ರಯ ತಾಣವೂ ಆಗಿದೆ. ಪದೇ ಪದೆ ಬೆಂಕಿ ಹಚ್ಚುವುದರಿಂದ ಬರುವ ಹೊಗೆ ಪರಿಸರಕ್ಕೆ ಹಾನಿ ಮಾಡುತ್ತಿದೆ. ಇಲ್ಲಿ ಬೀಡು ಬಿಟ್ಟಿರುವ ಫೆಲಿಕಾನ್ ಹಕ್ಕಿಗಳಿಗೂ ತೊಂದರೆಯಾಗುತ್ತಿದೆ.<br />ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸುವಲ್ಲಿ ಪಟ್ಟಣದ ಯುವಕರ ತಂಡವೊಂದು ಕಳೆದೆರೆಡು ವರ್ಷಗಳಿಂದ ಕಾರ್ಯಕ್ರಮ ನಡೆಸಿದ್ದಾರೆ.</p>.<p>ಕೆರೆಯ ಒಡಲಿಗೆ ತ್ಯಾಜ್ಯ ಹಾಕದಂತೆ ಶ್ರಮಿಸುತ್ತಿದ್ದಾರೆ. ಕೆರೆಯ ಕಟ್ಟೆಯ ಮೇಲೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಕಳೆದ ಪರಿಸರ ದಿನದಂದು ನೆಡಲಾಗಿದೆ. ಸ್ವಚ್ಛತೆ ನಡೆದಿದೆ. ಆದರೂ ಇತ್ತೀಚೆಗೆ ತ್ಯಾಜ್ಯ ತಂದು ಹಾಕುವವರು ಹೆಚ್ಚಿದ್ದಾರೆ.<br />ರಜಾ ದಿನಗಳಲ್ಲಿ ಕುಡುಕರು, ಮೋಜು ಮಾಡಲು ಬರುವವರ ಕಾಟ ಹೆಚ್ಚಿದೆ ಎನ್ನುತ್ತಾರೆ ಕೆರೆಯ ಪಕ್ಕದಲ್ಲಿರುವ ರೈತ ಗೋವಿಂದರಾಜು.</p>.<p>ಕೆರೆಯನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವಲ್ಲಿ ‘ಪಾರಂಪರಿಕ ತಾಣ ’ಎಂದು ಘೋಷಣೆ ಮಾಡುವಂತೆ ಕಳೆದ 9 ತಿಂಗಳಿಂದ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೆಟ್ಟ ಗಿಡಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಯವರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತ್ಯಾಜ್ಯ ವಸ್ತುಗಳನ್ನು ಹಾಕುವುದು ತಡೆಗಟ್ಟಲೂ ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರಾದ ಸಿ.ಎಸ್.ನಾಗಭೂಷಣ್ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ: </strong>ಪಟ್ಟಣದ ಹೊರವಲಯದಲ್ಲಿರುವ ಅಮಾನಿ ದೊಡ್ಡಕೆರೆ ಒಡಲಿಗೆ ಕಿಡಿಗೇಡಿಗಳು ತ್ಯಾಜ್ಯ ಸುರಿಯುವ, ಬೆಂಕಿ ಹಾಕುವ ಕೃತ್ಯ ಎಸಗುತ್ತಿದ್ದಾರೆ.</p>.<p>ಈ ಕೆರೆ ಪಟ್ಟಣದ ಜಲಮೂಲವೂ ಹೌದು. ಸಾವಿರಾರು ವಲಸೆಹಕ್ಕಿಗಳಿಗೆ ಆಶ್ರಯ ತಾಣವೂ ಆಗಿದೆ. ಪದೇ ಪದೆ ಬೆಂಕಿ ಹಚ್ಚುವುದರಿಂದ ಬರುವ ಹೊಗೆ ಪರಿಸರಕ್ಕೆ ಹಾನಿ ಮಾಡುತ್ತಿದೆ. ಇಲ್ಲಿ ಬೀಡು ಬಿಟ್ಟಿರುವ ಫೆಲಿಕಾನ್ ಹಕ್ಕಿಗಳಿಗೂ ತೊಂದರೆಯಾಗುತ್ತಿದೆ.<br />ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸುವಲ್ಲಿ ಪಟ್ಟಣದ ಯುವಕರ ತಂಡವೊಂದು ಕಳೆದೆರೆಡು ವರ್ಷಗಳಿಂದ ಕಾರ್ಯಕ್ರಮ ನಡೆಸಿದ್ದಾರೆ.</p>.<p>ಕೆರೆಯ ಒಡಲಿಗೆ ತ್ಯಾಜ್ಯ ಹಾಕದಂತೆ ಶ್ರಮಿಸುತ್ತಿದ್ದಾರೆ. ಕೆರೆಯ ಕಟ್ಟೆಯ ಮೇಲೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಕಳೆದ ಪರಿಸರ ದಿನದಂದು ನೆಡಲಾಗಿದೆ. ಸ್ವಚ್ಛತೆ ನಡೆದಿದೆ. ಆದರೂ ಇತ್ತೀಚೆಗೆ ತ್ಯಾಜ್ಯ ತಂದು ಹಾಕುವವರು ಹೆಚ್ಚಿದ್ದಾರೆ.<br />ರಜಾ ದಿನಗಳಲ್ಲಿ ಕುಡುಕರು, ಮೋಜು ಮಾಡಲು ಬರುವವರ ಕಾಟ ಹೆಚ್ಚಿದೆ ಎನ್ನುತ್ತಾರೆ ಕೆರೆಯ ಪಕ್ಕದಲ್ಲಿರುವ ರೈತ ಗೋವಿಂದರಾಜು.</p>.<p>ಕೆರೆಯನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವಲ್ಲಿ ‘ಪಾರಂಪರಿಕ ತಾಣ ’ಎಂದು ಘೋಷಣೆ ಮಾಡುವಂತೆ ಕಳೆದ 9 ತಿಂಗಳಿಂದ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೆಟ್ಟ ಗಿಡಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಯವರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ತ್ಯಾಜ್ಯ ವಸ್ತುಗಳನ್ನು ಹಾಕುವುದು ತಡೆಗಟ್ಟಲೂ ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರಾದ ಸಿ.ಎಸ್.ನಾಗಭೂಷಣ್ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>