ಕೆರೆಯ ಒಡಲಿಗೆ ತ್ಯಾಜ್ಯ ಹಾಕದಂತೆ ಶ್ರಮಿಸುತ್ತಿದ್ದಾರೆ. ಕೆರೆಯ ಕಟ್ಟೆಯ ಮೇಲೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಕಳೆದ ಪರಿಸರ ದಿನದಂದು ನೆಡಲಾಗಿದೆ. ಸ್ವಚ್ಛತೆ ನಡೆದಿದೆ. ಆದರೂ ಇತ್ತೀಚೆಗೆ ತ್ಯಾಜ್ಯ ತಂದು ಹಾಕುವವರು ಹೆಚ್ಚಿದ್ದಾರೆ.
ರಜಾ ದಿನಗಳಲ್ಲಿ ಕುಡುಕರು, ಮೋಜು ಮಾಡಲು ಬರುವವರ ಕಾಟ ಹೆಚ್ಚಿದೆ ಎನ್ನುತ್ತಾರೆ ಕೆರೆಯ ಪಕ್ಕದಲ್ಲಿರುವ ರೈತ ಗೋವಿಂದರಾಜು.