ಗ್ರಾಮದ ನಿವಾಸಿ ಪಂಚಾಕ್ಷರಿ ಮಾತನಾಡಿ, ‘2.1 ಎಕರೆ ಗುಂಟೆ ಜಾಗದಲ್ಲಿ ಗುಲಾಬಿ ಬೆಳೆದು ವಿದೇಶಕ್ಕೆ ರಪ್ತು ಮಾಡುತ್ತಿದ್ದೆ. ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆಯು 2007ರಲ್ಲಿ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿತ್ತು. 2010ರಲ್ಲಿ ಅಂತರರಾಷ್ಟ್ರೀಯ ಹೂಡಿಕೆದಾರರ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರ ನನ್ನ ಗ್ಲೋಬಲ್ ಕಂಪನಿ ಜೊತೆ ಗುಲಾಬಿ ಹೂಗಳ ರಪ್ತಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಉದ್ಯೋಗ ಮಿತ್ರ ಯೋಜನೆಯಲ್ಲಿ ಹೂಗಳ ರಪ್ತಿಗೆ ಅನುಮತಿ ನೀಡಿತ್ತು. ಅದಕ್ಕಾಗಿ ನಾನು ಯಶವಂತಪುರ ಸಿಂಡಿಕೇಟ್ ಬ್ಯಾಂಕ್ನಲ್ಲಿ 2 ಕೋಟಿ ಸಾಲ ಪಡೆದೆ. ಈಗ ನನ್ನ ಸ್ಥಿತಿ ಅತಂತ್ರವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.