ಬಿಬಿಎಂಪಿ ಹೆಚ್ಚುವರಿ ಆಯುಕ್ತ(ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್, ‘ವಾಯು ಮಾಲಿನ್ಯ ಅದೃಶ್ಯ ಕೊಲೆಗಾರ ಎಂಬುದು ಬಹುತೇಕರಿಗೂ ಗೊತ್ತಿದೆ. ಅದನ್ನು ತಗ್ಗಿಸಲು ವೈಯಕ್ತಿಕವಾಗಿ ಏನು ಮಾಡಬೇಕು ಎಂಬುದನ್ನು ಮತ್ತಷ್ಟು ಮನದಟ್ಟು ಮಾಡಬೇಕಿದೆ’ ಎಂದರು. ಸಂಗೀತ ಸಂಯೋಜಕ ರಿಕ್ಕಿ ಕೇಜ್,‘ಮಾಲಿನ್ಯ ನಿಯಂತ್ರಣವನ್ನು ‘ನಾನೊಬ್ಬನೇ ಮಾಡಲು ಸಾಧ್ಯವೇ. ಬೇರೆಯವರು ಮಾಡಲಿ’ ಎಂಬ ಮನಸ್ಥಿತಿಯಿಂದಾಗಿ ಸಮಸ್ಯೆ ಉಲ್ಭಣಿಸುತ್ತಿದೆ.