‘ತಾಲ್ಲೂಕಿನ ಚೀಮಂಡಹಳ್ಳಿ ಗ್ರಾಮದ ಗಿಡ್ಡಪ್ಪ ಅವರ ಪುತ್ರ ಮುನಿಶಾಮಣ್ಣ ತಮ್ಮ ಜಮೀನು ಮಾರಾಟಕ್ಕಿದೆ ಎಂದು ತಿಳಿಸಿದರು. ಎಕರೆಗೆ ₹ 42 ಲಕ್ಷದಂತೆ ಮಾತನಾಡಿ ಅವರಿಗೆ ಮುಂಗಡವಾಗಿ ₹ 25 ಲಕ್ಷ ಕೊಟ್ಟು ಕರಾರು ಪತ್ರ ಮಾಡಿಸಿಕೊಂಡಿದ್ದೆ. ಹಲವು ಸಾರಿ ಕೇಳಿದರೂ ಮುನಿಶಾಮಣ್ಣ ಜಮೀನಿನ ದಾಖಲೆ ಪತ್ರ ಮಾಡಿಸಲಿಲ್ಲ. ಸಬೂಬು ಹೇಳಿ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಸಂಶಯಗೊಂಡು ತಾಲ್ಲೂಕು ಕಚೇರಿಯಲ್ಲಿ ಮಾಹಿತಿ ಪಡೆಯಲು ಹೋದಾಗ ಜಮೀನಿನ ದಾಖಲೆಗಳೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು’ ಎಂದು ಬಸವರಾಜು ಹೇಳಿದರು.