ಭದ್ರತೆ ಮತ್ತು ವಾಹನ ನಿಲುಗಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸದಾಶಿವನಗರ, ಯಶವಂತಪುರ ಮತ್ತು ಮಲ್ಲೇಶ್ವರ ಪೊಲೀಸರ ಸಹಕಾರ ಕೇಳಲಾಗಿದ್ದು, 60ರಿಂದ 100 ಜನ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. ಜತೆಗೆ ಸಂಸ್ಥೆಯ 75 ಸಿಬ್ಬಂದಿ ಕೂಡ ಭದ್ರತೆ ನೋಡಿಕೊಳ್ಳಲಿದ್ದಾರೆ. ಕೆಲವರು ಸಮವಸ್ತ್ರ ರಹಿತವಾಗಿ ಜನರ ಚಲನ ವಲನ ಗಮನಿಸಲಿದ್ದಾರೆ.20 ಕಡೆ ಲೋಹ ಶೋಧಕಗಳನ್ನು ಅಳವಡಿಸಲಾಗುವುದು ಎಂದು ಸಂಸ್ಥೆಯ ಭದ್ರತೆ ಸಲಹೆಗಾರ ಚಂದ್ರಶೇಖರ್ ತಿಳಿಸಿದರು.