ಬೆಂಗಳೂರು: ‘ಬೀದಿ ಬದಿ ವ್ಯಾಪಾರಿಗಳಿಂದ ಯಾರಾದರೂ ಹಣ ವಸೂಲು ಮಾಡಿದರೆ ನನಗೆ ದೂರು ನೀಡಿ’.
ಹೀಗೆಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ, ಬಿಬಿಎಂಪಿ ಸಹಯೋಗದೊಂದಿಗೆ ಕೆ.ಆರ್.ಪೇಟೆ ಮಾರುಕಟ್ಟೆ ಪ್ರದೇಶದ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
‘ವ್ಯಾಪಾರಿಗಳಿಗೆ ಪೊಲೀಸರು, ಪಾಲಿಕೆ ಅಧಿಕಾರಿಗಳಿಂದಾಗುವ ಕಿರುಕುಳ ತಪ್ಪಬೇಕು. ಅದಕ್ಕಾಗಿ ಗುರುತಿನ ಚೀಟಿ ನಿಡುತ್ತಿದ್ದೇವೆ. ಪಾಲಿಕೆಯ 8 ವಲಯಗಳಲ್ಲಿ 24,629 ಬೀದಿ ವ್ಯಾಪಾರಿಗಳಿದ್ದಾರೆ’ ಎಂದು ಹೇಳಿದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, ‘ಕಲಾಸಿಪಾಳ್ಯ ವ್ಯಾಪ್ತಿಯ 1,600 ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಚೀಟಿ ಹೊಂದಿರುವವರು ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದು. ಅವರಿಗೆ ವಿವಿಧ ಸೌಲಭ್ಯಗಳು ಸಿಗಲಿವೆ’ ಎಂದರು.