‘ಮೈಸೂರಿನ ರಂಗಾಯಣದ ವೃತ್ತಿಪರ ಕಲಾವಿದರು 1994ರಲ್ಲಿ ‘ಕುಸುಮಬಾಲೆ’ಯಮೊದಲ ರಂಗಪ್ರಯೋಗದ ಪ್ರದರ್ಶನ ನೀಡಿದರು. ಬಳಿಕ ಪಕ್ಕದ ಜಿಲ್ಲೆಗಳಾದ ತುಮಕೂರು, ಕೋಲಾರ ಮತ್ತು ಮೈಸೂರಿನಲ್ಲಿ ಪ್ರದರ್ಶನ ಏರ್ಪಡಿಸಲಾಯಿತು. ಅಲ್ಲಿಜನರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಯಿತು. ಅದು ನಮ್ಮನ್ನು ‘ಕುಸಮಬಾಲೆ’ಯನ್ನು ಮತ್ತೆ–ಮತ್ತೆ ಜನರ ಬಳಿಗೆ ತರುವಂತೆ ಮಾಡಿದೆ’ ಎಂದು ಅವರು ತಿಳಿಸಿದರು.