‘ಕೆರೆಯನ್ನು ಬಿಡಿಎ ವತಿಯಿಂದ₹ 24 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆರೆಯ ಸುತ್ತ ತಂತಿಬೇಲಿ, ಉದ್ಯಾನ, 4 ಕಿಲೋಮೀಟರ್ ನಡಿಗೆ ಪಥ, ಕುಳಿತುಕೊಳ್ಳಲು ಆಸನ, ಕಲ್ಯಾಣಿ ನಿರ್ಮಿಸಿ, ಭದ್ರತಾ ಸಿಬ್ಬಂ ದಿಯನ್ನು ನಿಯೋಜಿಸಲಾಗಿದೆ. ಬಿಡಿಎ ಅಧಿಕಾರಿಗಳು ಪ್ರಭಾವಿಗಳ ಜೊತೆಗೆ ಶಾಮೀಲಾಗಿ ನಿವೇಶನಗಳನ್ನು ವಿಂಗಡಿಸಿ, ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.