ಪುದುಚೇರಿಯ ಜೆಐಪಿಎಂಇಆರ್ ಸಂಸ್ಥೆಯ ಜೊತೆಗೂಡಿ ಕೈಗಳನ್ನು ಜೋಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಆನೇಕಲ್ನ ಯುವಕನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಭಾನುವಾರ ಘೋಷಿಸಿದ್ದರು. ಪೋಷಕರ ಒಪ್ಪಿಗೆ ಪಡೆದು ಯುವಕನ, ಹೃದಯದ ಕವಾಟಗಳು, ಶ್ವಾಸಕೋಶ, ಯಕೃತ್, ಮೂತ್ರಪಿಂಡ, ಕಣ್ಣ ಮತ್ತು ಕೈಗಳನ್ನು ದಾನ ಪಡೆದುಕೊಳ್ಳಲಾಗಿದೆ.